ಇದಕ್ಕೂ ಮೊದಲು ಮೋದಿ ಅವರು ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಹಬೂಬಾಬಾದ್ ಮತ್ತು ಕರೀಂನಗರಕ್ಕೆ ತೆರಳಿ ಪ್ರಚಾರ ರ್ಯಾಲಿ ನಡೆಸಿದರು. ‘ಬಿಜೆಪಿ ಜನಪ್ರಿಯತೆ ಗಳಿಸುತ್ತಿರುವ ವೇಗವನ್ನು ಮನಗಂಡಿದ್ದ ಬಿಆರ್ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಅವರು ತಮ್ಮ ಪಕ್ಷದ ಜೊತೆ ಸ್ನೇಹ ಸಾಧಿಸಲು ಪ್ರಯತ್ನಿಸಿದ್ದರು’ ಎಂದು ಕರೀಂನಗರದಲ್ಲಿ ಮೋದಿ ಆರೋಪಿಸಿದರು.