‘ಸಿಎಎ ಅನುಷ್ಠಾನ ಪ್ರಶ್ನಿಸಿ ಐಯುಎಂಎಲ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಗಳು ರಾಜಕೀಯ ಪ್ರೇರಿತವಾಗಿವೆ. ಈ ತಿದ್ದುಪಡಿ ಕಾಯ್ದೆ ಅನುಷ್ಠಾನದಿಂದ ಅರ್ಜಿದಾರರ ಯಾವ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗುವುದಿಲ್ಲ. ಹೀಗಾಗಿ, ಸಂವಿಧಾನ 32ನೇ ವಿಧಿ ಪ್ರಕಾರ, ಈ ಪಿಐಎಲ್ಗಳು ಸಮರ್ಥನೀಯವಲ್ಲದ ಕಾರಣ, ಅವುಗಳನ್ನು ವಜಾಗೊಳಿಸುವ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯವನ್ನು ಉಳಿಸಬೇಕು’ ಎಂದು ಉಪಾಧ್ಯಾಯ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.