‘ಲಖ್ವಾಡ್ ಯೋಜನೆ ಕುರಿತು ಮಾತನಾಡಿದ ಅವರು, 1974ರಲ್ಲಿಯೇ ಈ ಯೋಜನೆ ರೂಪಿಸಲಾಗಿತ್ತು. ಆದರೆ ಅದು ಅನುಷ್ಠಾನಕ್ಕೆ ಬರಲು 46 ವರ್ಷಗಳು ಬೇಕಾದವು. ಲಖ್ವಾಡ್ ಯೋಜನೆ ಈ ಮೊದಲೇ ಜಾರಿ ಆಗಿದ್ದರೆ, ಉತ್ತರಾಖಂಡದಲ್ಲಿ ಕುಡಿಯುವ ನೀರು, ವಿದ್ಯುತ್, ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿತ್ತು. ಇಂಥ ಯೋಜನೆಯನ್ನು ಇಷ್ಟು ವರ್ಷಗಳ ಕಾಲ ವಿಳಂಬ ಮಾಡಿದ್ದು ಈ ಹಿಂದೆ ಆಡಳಿತ ನಡೆಸಿದವರು ಮಾಡಿದ ಪಾಪ ಕೃತ್ಯವಲ್ಲವೇ. ನೀವು ಈ ಪಾಪ ಕೃತ್ಯವನ್ನು ಕ್ಷಮಿಸುತ್ತೀರಾ’ ಎಂದು ಅವರು ಜನರನ್ನು ಕೇಳಿದರು.