ಈ ವೇಳೆ ಕೋರ್ಟ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಹಣ ಅಕ್ರಮ ವರ್ಗಾವಣೆ ಪ್ರಕರಣ ಅಲ್ಲ, ರಾಜಕೀಯ ಪಕ್ಷ ಬದಲಾವಣೆ ಪ್ರಕರಣ. ಒಬ್ಬ ಆರೋಪಿ ಈಗಾಗಲೇ ಬಿಜೆಪಿ ಸೇರಿದ್ದಾರೆ, ಎರಡನೇ ಆರೋಪಿ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಮೂರನೇ ಆರೋಪಿ ಚುನಾವಣಾ ಬಾಂಡ್ ಮೂಲಕ ₹50 ಕೋಟಿ ನೀಡಿದ್ದಾರೆ. ಇದೊಂದು ಸುಳ್ಳು ಪ್ರಕರಣ. ಕ್ಲೀನ್ಚಿಟ್ ಪಡೆದು ಇಲ್ಲಿಂದ ಹೊರಬರುತ್ತೇವೆ. ಜೈ ತೆಲಂಗಾಣ’ ಎಂದು ಹೇಳಿದರು.