ಮುಂತಾಜ್ಮಿಯಾ ಕಮಿಟಿ ಮದರಸಾ ಬೆಹ್ರುಲ್ ಉಲುಮ್ ಆ್ಯಂಡ್ ಕಬರಸ್ತಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ದತ್ತಾ ಅವರು ವಜಾ ಮಾಡಿದ್ದು, ‘ಶಬ್–ಎ– ಬರಾತ್ ಸಂದರ್ಭದಲ್ಲಿಯೂ ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಕಳೆದ ತಿಂಗಳು ಈ ನ್ಯಾಯಾಲಯವು ಅವಕಾಶ ನೀಡಿರಲಿಲ್ಲ. ಅದೇ ರೀತಿ, ಈ ಮನವಿಗೆ ಸಂಬಂಧಿಸಿದಂತೆ ಬೇರೆ ದೃಷ್ಟಿಕೋನದಲ್ಲಿ ಯೋಚಿಸಿ ನಿರ್ಧರಿಸಲು ಯಾವ ಸಮರ್ಥನೆಯೂ ಕಾಣುತ್ತಿಲ್ಲ’ ಎಂದು ಹೇಳಿದರು.