ರಾಜಭವನಕ್ಕೆ ಬರುವ ಅತಿಥಿಗಳಿಗಾಗಿ ಹೆಚ್ಚುವರಿ ವಾಹನ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿರುವ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ರಾಜಭವನಕ್ಕೆ ಹೆಚ್ಚುವರಿ ಅತಿಥಿಗಳು ಬಂದಾಗ ಹೆಚ್ಚುವರಿ ವಾಹನ ಒದಗಿಸುವಂತೆ ಸರ್ಕಾರವನ್ನು ಕೇಳಬೇಕಾಗುತ್ತದೆ. ಅದರಲ್ಲಿ ವಿಶೇಷ ಏನಿದೆ. ರಾಜ್ಯಪಾಲರ ಭೇಟಿಗೆ ಬರುವವರನ್ನು ನಡೆದುಕೊಂಡು ಬನ್ನಿ ಎಂದು ಹೇಳಬೇಕೇ’ ಎಂದು ಪ್ರಶ್ನಿಸಿದ್ದಾರೆ.