ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೀಸಲಾದ ಕೋಟಾದಡಿ ಹುದ್ದೆಗಳು ಖಾಲಿ ಉಳಿದರೆ, ಅವನ್ನು ಮೀಸಲಾತಿಯಿಂದ ಹೊರತರುವ ಕುರಿತಂತೆ ಕರಡು ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದ್ದ ಯುಜಿಸಿ, ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿತ್ತು. ಮಾರ್ಗಸೂಚಿ ಬಿಡುಗಡೆಗೊಂಡ ನಂತರ ಎಲ್ಲೆಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.