‘ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆ ದಾಟಲು ಸಾಧ್ಯವಾಗದ ಕಾರಣ 2023 ಅನ್ನು ‘ಶೂನ್ಯ-ಒಳನುಸುಳುವಿಕೆ ವರ್ಷ’ವೆಂದು ಘೋಷಿಸಲಾಗಿದೆ. ಆದರೆ, ಅನೇಕ ಭಯೋತ್ಪಾದಕರು ಗಟಿ ದಾಟಿ ಬರುತ್ತಿದ್ದಾರೆ. ನಾವು ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಕಳೆದ ವರ್ಷ ಕೊಲ್ಲಲಾದ ಭಯೋತ್ಪಾದಕರಲ್ಲಿ 21 ಮಂದಿ ಸ್ಥಳೀಯರು. ಉಳಿದ 55 ಮಂದಿ ವಿದೇಶಿಗರು. 2022ರಲ್ಲಿ 121 ಭಯೋತ್ಪಾದಕರನ್ನು ಉಗ್ರ ಸಂಘಟನೆಗಳು ನೇಮಕಾತಿ ಮಾಡಿಕೊಂಡಿದ್ದವು. ಆದರೆ, 2023ರಲ್ಲಿ 19 ಭಯೋತ್ಪಾದಕರನ್ನು ನೇಮಿಸಿಕೊಂಡಿರುವ ವರದಿ ಸಿಕ್ಕಿದೆ’ ಎಂದು ದ್ವಿವೇದಿ ಸುದ್ದಿಗಾರರಿಗೆ ಹೇಳಿದರು.