ತಡೆ ನೀಡಲು ಕೊರಲಾಗಿರುವ ಬರಹದಲ್ಲಿ ಇರುವ ವಿಷಯವು ‘ದುರುದ್ದೇಶದಿಂದ ಕೂಡಿದೆ’, ಅದು ‘ಸ್ಪಷ್ಟವಾಗಿ ತಪ್ಪು’ ಎಂಬುದು ಸಾಬೀತಾಗದ ಹೊರತು ತಡೆಯಾಜ್ಞೆ ನೀಡಬಾರದು, ಅದರಲ್ಲೂ ಮುಖ್ಯವಾಗಿ, ಎಲ್ಲರ ವಾದ ಆಲಿಸದೆ ತಡೆ ನೀಡಬಾರದು ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಕೂಡ ಇದ್ದ ಪೀಠವು ನಿರ್ದೇಶನ ನೀಡಿದೆ.