ಜಮ್ಮು: ‘ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿದ ಆರೋಪದಡಿ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
‘ಭದ್ರತಾ ಸಿಬ್ಬಂದಿಯು ನಿಖರ ಮಾಹಿತಿ ಮೇರೆಗೆ ಕಂಗಾ ಭ್ರೋತಿ ಗ್ರಾಮದ ಹಲವೆಡೆ ಶೋಧ ನಡೆಸಿದೆ. ಈ ವೇಳೆ ಇಬ್ಬರನ್ನು ಬಂಧಿಸಲಾಗಿದ್ದು, ಅವರಿಂದ ₹25.81 ಲಕ್ಷ ವಶಕ್ಕೆ ಪಡೆಯಲಾಗಿದೆ. ಇದು ಭಯೋತ್ಪಾದಕರಿಗೆ ನೀಡಲು ಸಂಗ್ರಹಿಸಿದ ಹಣ’ ಎಂದು ಅವರು ಹೇಳಿದರು.
‘ಬಂಧಿತರನ್ನು ಮೊಹಮ್ಮದ್ ಶಕೀಲ್ ಮತ್ತು ಮೊಹಮ್ಮದ್ ಅಲ್ಯಾಸ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಮೆಂದಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈಗಾಗಲೇ ತನಿಖೆಯನ್ನು ಪ್ರಾರಂಭಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.