ಕೋಲ್ಕತ್ತ: ರಾಮನವಮಿ ಸಂದರ್ಭ ಹಿಂಸಾಚಾರ ತಡೆಯಲು ವಿಫಲರಾದ ಆರೋಪದ ಮೇಲೆ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಎರಡು ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಸೂಚನೆಗಳ ಹೊರತಾಗಿಯೂ ಧಾರ್ಮಿಕ ಹಿಂಸಾಚಾರ ನಿಲ್ಲಿಸಲು ಶಕ್ತಿಪುರ ಮತ್ತು ಬೆಲ್ದಂಗ ಪೊಲೀಸ್ ಠಾಣೆಯ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆಯೋಗ ತಿಳಿಸಿದೆ.
‘ಚುನಾವಣಾ ಸಂಬಂಧಿತ ಯಾವುದೇ ಕೆಲಸ ನಿರ್ವಹಿಸಲು ಇವರಿಗೆ ಸಾಧ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಇಬ್ಬರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಬೇಕು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇವರಿಬ್ಬರ ಸ್ಥಾನಕ್ಕೆ ಬದಲಿ ಹೆಸರನ್ನು ಸೂಚಿಸುವಂತೆಯೂ ಆಯೋಗ ತಿಳಿಸಿದೆ.