ಶಿವಗಿರಿ ಮಠದ 90ನೇ ವರ್ಷದ ತೀರ್ಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಷ್ಟ್ರದ ಭದ್ರತೆ ವಿಷಯದಲ್ಲಿ ರಾಜಿ ಮಾಡಿಕೊಂಡು ಉತ್ತಮ ಸ್ನೇಹಸಂಬಂಧವನ್ನು ಭಾರತ ಇರಿಸಿಕೊಳ್ಳುವುದಿಲ್ಲ’ ಎಂದರು. ‘ಸ್ನೇಹಿತರನ್ನು ಬದಲಿಸಬಹುದು. ಆದರೆ, ನೆರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ’ ಎನ್ನುವ ಮಾಜಿ ಪ್ರಧಾನಿ ವಾಜಪೇಯ ಅವರ ಮಾತನ್ನು ಸಚಿವರು ಸ್ಮರಿಸಿದರು.