ಲತಾ ಜಿ. ಎಂ. ಅವರು ‘ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಆರಿಸಿ ಬಂದ ಸರ್ಕಾರ ಯಾವುದೇ ಒಂದು ಬಗೆಯ ಆಹಾರದ ಮೇಲೆ ನರಭಕ್ಷಕ ಹೊರತುಪಡಿಸಿ ಹೇರುವ ನಿಷೇಧ, ಸಂವಿಧಾನದ ಆಶಯಗಳ ಉಲ್ಲಂಘನೆ’ ಎಂದಿದ್ದಾರೆ (ವಾ.ವಾ., ಮಾ. 16). ನರಭಕ್ಷಕ ಹೊರತುಪಡಿಸಿ ಯಾವುದೇ ಆಹಾರದ ಮೇಲೆ ನಿಷೇಧ ಹೇರುವುದು ಸಂವಿಧಾನದ ಆಶಯಗಳ ಉಲ್ಲಂಘನೆ
ಯಾದರೆ ಪಶುಭಕ್ಷಣೆ ಸಂವಿಧಾನದ ಆಶಯವೆ?
ಮಾಂಸಾಹಾರ ಸ್ವೀಕೃತ ಆಹಾರವಾಗಿದ್ದರೆ, ಗಾಂಧಿ ಜಯಂತಿಯಂದು ಮಾಂಸದ ಅಂಗಡಿಗಳನ್ನು ಮುಚ್ಚಲು ಸರ್ಕಾರವೇ ಏಕೆ ಆದೇಶ ಹೊರಡಿಸುತ್ತದೆ? ಸಸ್ಯಾಹಾರಕ್ಕಿಂತ ಮಾಂಸಾಹಾರದಲ್ಲೇ ಹೆಚ್ಚಿನ ಪೌಷ್ಟಿಕಾಂಶ ಇರಬಹುದು. ಆದರೆ ಶಾಖಾಹಾರದಂತೆ ಸಾತ್ವಿಕ ಆಹಾರವಲ್ಲ. ಈ ಭೂಮಿ ಎಲ್ಲರಿಗೂ ಆಹಾರಧಾನ್ಯ ಒದಗಿಸಲಾರದಷ್ಟು ಬರಡಲ್ಲ. ಆಧುನಿಕ ಮಾನವರು ಬೇಯಿಸಿದ ಮಾಂಸವನ್ನು ಸೇವಿಸುತ್ತಾರೆ. ಆಗಿನ ಅನಾಗರಿಕ ಆದಿ ಮಾನವರಿಂದ ಈಗಿನ ಆಧುನಿಕ ನಾಗರಿಕ ಮಾನವನವರೆಗೆ ಆಗಿರುವ ಬದಲಾವಣೆ ಇಷ್ಟೇ ಏನು?