ನವದೆಹಲಿ: ಭಾರತದ ಅಥ್ಲೀಟ್ ಹಿಮಾ ದಾಸ್ ಅವರು ಐಎಎಎಫ್ (ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್) ಆಯೋಜಿಸುವ ಕಾಂಟಿನೆಂಟಲ್ ಕಪ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹಿಮಾ ಅವರಿಗೆ ವಿಶ್ರಾಂತಿ ನೀಡಲು ಭಾರತ ಅಥ್ಲೆಟಿಕ್ ಫೆಡರೇಷನ್ ನಿರ್ಧರಿಸಿದೆ.
’ಕಾಮನ್ವೆಲ್ತ್ ಕ್ರೀಡಾಕೂಟ, ವಿಶ್ವ ಜೂನಿಯರ್ ಚಾಂಪಿಯನ್ಷಿಪ್ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಹಿಮಾ ಅವರು ಸ್ಪರ್ಧಿಸಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯ ನಂತರ ಅಥ್ಲೀಟ್ಗಳಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ’ ಎಂದು ಕೋಚ್ ಒಬ್ಬರು ಹೇಳಿದ್ದಾರೆ.
ಶನಿವಾರ ಹಾಗೂ ಭಾನುವಾರ ಜೆಕ್ ರಿಪಬ್ಲಿಕ್ನಲ್ಲಿ ಟೂರ್ನಿ ನಡೆಯಲಿದೆ. ಯುರೋಪ್, ಆಫ್ರಿಕಾ, ಅಮೆರಿಕ ಹಾಗೂ ಏಷ್ಯಾ–ಪೆಸಿಫಿಕ್ ತಂಡಗಳು ಇದರಲ್ಲಿ ಸ್ಪರ್ಧಿಸಲಿವೆ.