‘ಈ ಪ್ರದೇಶದಲ್ಲಿ ಶಾಂತಿ ನೆಲೆಸುವುದನ್ನು ನಾವು ಬಯಸುತ್ತೇವೆ. ಇಲ್ಲಿನ ಯುವಕ– ಯುವತಿಯರು ಗುಣಮಟ್ಟದ ಶಿಕ್ಷಣ ಮತ್ತು ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬುದು ನಮ್ಮ ಬಯಕೆ. ಸೇನೆ ಮತ್ತು ಸರ್ಕಾರ ಜೊತೆಯಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಸ್ಥಳೀಯರು ನೀಡುವ ಸಲಹೆಗಳನ್ನು ಜಾರಿ ಮಾಡಲು ನಾವು ಸಿದ್ಧ’ ಎಂದು ರಣಬೀರ್ ಸಿಂಗ್ ಭರವಸೆ ನೀಡಿದರು.