ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಸು, ‘ ಬಿಜೆಪಿ ವಿರೋಧಿ ಮತ್ತು ತೃಣಮೂಲ ಕಾಂಗ್ರೆಸ್ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ನಾವು ಗರಿಷ್ಠ ಶ್ರಮ ಹಾಕಿದ್ದೆವು. ಆದರೆ ರಾಜಕೀಯ ವಲಯದಲ್ಲಿ ಹಣದ ಚೀಲಗಳು ಓಡಾಡುತ್ತಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಬಹಳಷ್ಟು ಹಣದ ಚೀಲಗಳಿರುವವರ ಜೊತೆಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿರುವುದಿಲ್ಲ. ಅಂಥ ಕಡೆ ಮಾತುಕತೆ, ಒಪ್ಪಂದಗಳು ಅರ್ಥ ಕಳೆದುಕೊಳ್ಳುತ್ತವೆ’ ಎಂದರು.