<p>ಸಾವಿಲ್ಲದ ಮನೆಯ ಸಾಸಿವೆಗೆ ಸುತ್ತಿದವಳ ಮಗ<br /> ಕೊನೆಗೂ ಅಳಿಸಲಾಗದ ನೆನಪಿನಲ್ಲಷ್ಟೇ ಉಳಿದ,<br /> ಸಾವೇ ಇಲ್ಲದ ಅಶ್ವತ್ಥಾಮ<br /> ಕಾಲವನ್ನು ಧಿಕ್ಕರಿಸಲಾಗದೇ ಹತಾಶನಾದ,<br /> ಇನ್ನೊಬ್ಬನಿದ್ದ- ಪ್ರೀತಿಯ ಹುಡುಗ- ಈಗ<br /> ಮನುಷ್ಯರೂಪ ಕಳಚಿಕೊಂಡು ಹಸಿರು<br /> ಮಿಡಿತೆಯಾಗಿ ಗದ್ದೆ ತೋಟಗಳಲ್ಲಿ ಸುತ್ತುತ್ತಿದ್ದಾನೆ.</p>.<p>ಬೆಳೆದೂ ಬೆಳೆದೂ ಸುಸ್ತಾದವರಿಗೆ<br /> ಮನುಷ್ಯತನ ಕಳೆದುಕೊಂಡವರಿಗೆ<br /> ಕಬಂಧ ದೇಹ ಅನಿವಾರ್ಯ;<br /> ಬಾಹುಬಲಕ್ಕೆ ಬಲಿ ಬೇಕೇಬೇಕು;<br /> ಪಾತಾಳಕ್ಕೆ ತಳ್ಳುವ ವಾಮನರಿಲ್ಲದೆ<br /> ತ್ರಿವಿಕ್ರಮವೆಂತು ಉದಿಸಬೇಕು?<br /> ಬಕಧ್ಯಾನವಿಲ್ಲದಿದ್ದರೆ ನಿರಂತರ ಉಪವಾಸ.</p>.<p>ತಾನೇ ಒಂದು ಕಾಡಿನಂತೆ ಬೆಳೆವ,<br /> ವಿಶಾಲ ವ್ಯಾಪಿಸುವ ವೃಕ್ಷಗಳಿವೆ,<br /> ತನ್ನೆಲ್ಲವನ್ನೂ ಆಕಾಶಕ್ಕೆ ಅರ್ಪಿಸುವಂತೆ<br /> ಫೋಸು ಕೊಟ್ಟು ಗೆಲ್ಲು-<br /> ಎಲೆ-ಚಿಗುರು-ಹೂವು-ಹಣ್ಣುಗಳನ್ನು ಎತ್ತಿಹಿಡಿಯುತ್ತವೆ,<br /> ಬಿಳಲುಗಳನ್ನಿಳಿಸಿ ನೆಲವನ್ನೇ ಕಿತ್ತು ಆಗಸಕ್ಕೆಸೆಯುವಂತಿದೆ ನೆಲೆ.<br /> <br /> ಭೂತಳದಲ್ಲಿರುವ ಬೇರಿನ ಬುಡವನ್ನು ಕತ್ತರಿಸಲು<br /> ರಾಮಬಾಣವೂ ತುಕ್ಕುಹಿಡಿದು ನಿರಾಕರಿಸುತ್ತಿದೆ<br /> ದಶಕಂಠದ ಕೊರಳಿಗೆ ಹಾರವಾಗುತ್ತಿದೆ.<br /> <br /> ಅಸ್ಥಿಪಂಜರವನ್ನು ಎತ್ತಿ ಇಳಿಸಿ ಬೆವರು ಸುರಿಸುವುದೇ<br /> ನಿತ್ಯದ ವ್ಯಾಯಾಮ.<br /> ಭೀಮ ಸೌಟು ಹಿಡಿದು ಬಕಾಸುರನಿಗಾಗಿ ಅಡುಗೆಯಲ್ಲಿ ತಲ್ಲೆನ<br /> ಏಕಚಕ್ರಕ್ಕೀಗ ಮುಕ್ತಿಯೆಲ್ಲಿ?</p>.<p>ರಾಮಲೀಲಾಜಾಲದಲ್ಲಿ<br /> ಸತ್ತವನು ರಾವಣನೆಂದುಕೊಂಡರೆ<br /> ರಕ್ತವರ್ಷಕ್ಕೆ ಎಲ್ಲ ಕಡೆ ಮೊಳೆತಿದೆ ಹತ್ತು ತಲೆಗಳ ಬೆಳೆ.</p>.<p>ಸದಾಚಾರದ ನೂರು ರೂಪಗಳಲ್ಲಿ ಅವತರಿಸಲು<br /> ಭಗವಂತನಿಗೂ ಭೀತಿ;<br /> ಭ್ರಷ್ಟಭೂತಗಳೆಲ್ಲ ಗುಡಿಗೋಪುರಗಳಲ್ಲಿ ಪೂಜೆಗೊಳ್ಳುವಾಗ,<br /> ನಿರ್ವೀರ್ಯ ಸಜ್ಜನರೆಲ್ಲ<br /> ಅಷ್ಟಿಷ್ಟು ಅಮೃತಕ್ಕೆ ಕೈಯೊಡ್ಡಿ ನಿಂತಾಗ,<br /> ರೋಮ್ ಉರಿಯುತ್ತಿರುವಾಗ<br /> ನೀರೋ ಎಂಬ ಬುದ್ಧಿಜೀವಿ ಪಿಟೀಲು ನುಡಿಸುವಾಗ,<br /> ದ್ರೌಪದಿಯ ವಸ್ತ್ರಹರಣ, ಖಾಂಡವವನ ಹನನ ನಡೆಯುವಾಗ<br /> ವೇದಿಕೆಗಳಿಂದ ಪಂಪ-ಪರಿಸರಾದಿಗಳ ವಿಮರ್ಶೆಯ ಜಾಗತೀ-ಗತಿಗೆ<br /> ಬಡವರಿಗೂ ಬಡದೇವರೇ ಗತಿ!</p>.<p>ದೀಪದಡಿ ಮಾತ್ರವಲ್ಲ<br /> ಹಬ್ಬಿದ ದೊಡ್ಡ ಮರದಡಿಯಲ್ಲೂ ಕತ್ತಲು,<br /> ಬೆಳಕು ಬೇಕೆಂದರೆ ಕಡ್ಡಿ ಗೀರಬೇಕು.<br /> ಗೋಲಿಯಾತನ ಎದುರು<br /> ಗೋಲಿಯಾಡುವ ಹುಡುಗನ ಆಟವೆಂತು?</p>.<p>ನಾನು ಪ್ರಾಮಾಣಿಕ,<br /> ನಿಮ್ಮೆದುರು ನಡುಬಗ್ಗಿಸಿ ನಿಂತಿದ್ದೇನೆ<br /> ನಿಮ್ಮದೇ ಅನ್ನವುಂಡ ತಪ್ಪಿಗೆ<br /> ಸಮುದ್ರ ಮಥನದಲ್ಲಿ ದೇವದಾನವರೆಲ್ಲ ಒಂದಾಗಿದ್ದೇವೆ<br /> ಹಾಲಾಹಲವನ್ನಿಳಿಸಿಕೊಳ್ಳುವ ಗಂಟಲು ಯಾರಿಗೂ ಇಲ್ಲ.</p>.<p>ನೀವೆಂಬ ಉಪ್ಪಿನ ಸಮುದ್ರಕ್ಕೆ ನಾನಿಳಿಯಲಾರೆ;<br /> ಏಕೆಂದರೆ ನಾನೂ ಉಪ್ಪಿನ ಗೊಂಬೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾವಿಲ್ಲದ ಮನೆಯ ಸಾಸಿವೆಗೆ ಸುತ್ತಿದವಳ ಮಗ<br /> ಕೊನೆಗೂ ಅಳಿಸಲಾಗದ ನೆನಪಿನಲ್ಲಷ್ಟೇ ಉಳಿದ,<br /> ಸಾವೇ ಇಲ್ಲದ ಅಶ್ವತ್ಥಾಮ<br /> ಕಾಲವನ್ನು ಧಿಕ್ಕರಿಸಲಾಗದೇ ಹತಾಶನಾದ,<br /> ಇನ್ನೊಬ್ಬನಿದ್ದ- ಪ್ರೀತಿಯ ಹುಡುಗ- ಈಗ<br /> ಮನುಷ್ಯರೂಪ ಕಳಚಿಕೊಂಡು ಹಸಿರು<br /> ಮಿಡಿತೆಯಾಗಿ ಗದ್ದೆ ತೋಟಗಳಲ್ಲಿ ಸುತ್ತುತ್ತಿದ್ದಾನೆ.</p>.<p>ಬೆಳೆದೂ ಬೆಳೆದೂ ಸುಸ್ತಾದವರಿಗೆ<br /> ಮನುಷ್ಯತನ ಕಳೆದುಕೊಂಡವರಿಗೆ<br /> ಕಬಂಧ ದೇಹ ಅನಿವಾರ್ಯ;<br /> ಬಾಹುಬಲಕ್ಕೆ ಬಲಿ ಬೇಕೇಬೇಕು;<br /> ಪಾತಾಳಕ್ಕೆ ತಳ್ಳುವ ವಾಮನರಿಲ್ಲದೆ<br /> ತ್ರಿವಿಕ್ರಮವೆಂತು ಉದಿಸಬೇಕು?<br /> ಬಕಧ್ಯಾನವಿಲ್ಲದಿದ್ದರೆ ನಿರಂತರ ಉಪವಾಸ.</p>.<p>ತಾನೇ ಒಂದು ಕಾಡಿನಂತೆ ಬೆಳೆವ,<br /> ವಿಶಾಲ ವ್ಯಾಪಿಸುವ ವೃಕ್ಷಗಳಿವೆ,<br /> ತನ್ನೆಲ್ಲವನ್ನೂ ಆಕಾಶಕ್ಕೆ ಅರ್ಪಿಸುವಂತೆ<br /> ಫೋಸು ಕೊಟ್ಟು ಗೆಲ್ಲು-<br /> ಎಲೆ-ಚಿಗುರು-ಹೂವು-ಹಣ್ಣುಗಳನ್ನು ಎತ್ತಿಹಿಡಿಯುತ್ತವೆ,<br /> ಬಿಳಲುಗಳನ್ನಿಳಿಸಿ ನೆಲವನ್ನೇ ಕಿತ್ತು ಆಗಸಕ್ಕೆಸೆಯುವಂತಿದೆ ನೆಲೆ.<br /> <br /> ಭೂತಳದಲ್ಲಿರುವ ಬೇರಿನ ಬುಡವನ್ನು ಕತ್ತರಿಸಲು<br /> ರಾಮಬಾಣವೂ ತುಕ್ಕುಹಿಡಿದು ನಿರಾಕರಿಸುತ್ತಿದೆ<br /> ದಶಕಂಠದ ಕೊರಳಿಗೆ ಹಾರವಾಗುತ್ತಿದೆ.<br /> <br /> ಅಸ್ಥಿಪಂಜರವನ್ನು ಎತ್ತಿ ಇಳಿಸಿ ಬೆವರು ಸುರಿಸುವುದೇ<br /> ನಿತ್ಯದ ವ್ಯಾಯಾಮ.<br /> ಭೀಮ ಸೌಟು ಹಿಡಿದು ಬಕಾಸುರನಿಗಾಗಿ ಅಡುಗೆಯಲ್ಲಿ ತಲ್ಲೆನ<br /> ಏಕಚಕ್ರಕ್ಕೀಗ ಮುಕ್ತಿಯೆಲ್ಲಿ?</p>.<p>ರಾಮಲೀಲಾಜಾಲದಲ್ಲಿ<br /> ಸತ್ತವನು ರಾವಣನೆಂದುಕೊಂಡರೆ<br /> ರಕ್ತವರ್ಷಕ್ಕೆ ಎಲ್ಲ ಕಡೆ ಮೊಳೆತಿದೆ ಹತ್ತು ತಲೆಗಳ ಬೆಳೆ.</p>.<p>ಸದಾಚಾರದ ನೂರು ರೂಪಗಳಲ್ಲಿ ಅವತರಿಸಲು<br /> ಭಗವಂತನಿಗೂ ಭೀತಿ;<br /> ಭ್ರಷ್ಟಭೂತಗಳೆಲ್ಲ ಗುಡಿಗೋಪುರಗಳಲ್ಲಿ ಪೂಜೆಗೊಳ್ಳುವಾಗ,<br /> ನಿರ್ವೀರ್ಯ ಸಜ್ಜನರೆಲ್ಲ<br /> ಅಷ್ಟಿಷ್ಟು ಅಮೃತಕ್ಕೆ ಕೈಯೊಡ್ಡಿ ನಿಂತಾಗ,<br /> ರೋಮ್ ಉರಿಯುತ್ತಿರುವಾಗ<br /> ನೀರೋ ಎಂಬ ಬುದ್ಧಿಜೀವಿ ಪಿಟೀಲು ನುಡಿಸುವಾಗ,<br /> ದ್ರೌಪದಿಯ ವಸ್ತ್ರಹರಣ, ಖಾಂಡವವನ ಹನನ ನಡೆಯುವಾಗ<br /> ವೇದಿಕೆಗಳಿಂದ ಪಂಪ-ಪರಿಸರಾದಿಗಳ ವಿಮರ್ಶೆಯ ಜಾಗತೀ-ಗತಿಗೆ<br /> ಬಡವರಿಗೂ ಬಡದೇವರೇ ಗತಿ!</p>.<p>ದೀಪದಡಿ ಮಾತ್ರವಲ್ಲ<br /> ಹಬ್ಬಿದ ದೊಡ್ಡ ಮರದಡಿಯಲ್ಲೂ ಕತ್ತಲು,<br /> ಬೆಳಕು ಬೇಕೆಂದರೆ ಕಡ್ಡಿ ಗೀರಬೇಕು.<br /> ಗೋಲಿಯಾತನ ಎದುರು<br /> ಗೋಲಿಯಾಡುವ ಹುಡುಗನ ಆಟವೆಂತು?</p>.<p>ನಾನು ಪ್ರಾಮಾಣಿಕ,<br /> ನಿಮ್ಮೆದುರು ನಡುಬಗ್ಗಿಸಿ ನಿಂತಿದ್ದೇನೆ<br /> ನಿಮ್ಮದೇ ಅನ್ನವುಂಡ ತಪ್ಪಿಗೆ<br /> ಸಮುದ್ರ ಮಥನದಲ್ಲಿ ದೇವದಾನವರೆಲ್ಲ ಒಂದಾಗಿದ್ದೇವೆ<br /> ಹಾಲಾಹಲವನ್ನಿಳಿಸಿಕೊಳ್ಳುವ ಗಂಟಲು ಯಾರಿಗೂ ಇಲ್ಲ.</p>.<p>ನೀವೆಂಬ ಉಪ್ಪಿನ ಸಮುದ್ರಕ್ಕೆ ನಾನಿಳಿಯಲಾರೆ;<br /> ಏಕೆಂದರೆ ನಾನೂ ಉಪ್ಪಿನ ಗೊಂಬೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>