


ರಬ್ಬರ್ ಹಾಲು ಸಂಗ್ರಹಿಸುವ ಪ್ರಕ್ರಿಯೆ

ಮರದಲ್ಲಿ ಸಂಗ್ರಹವಾಗಿರುವ ರಬ್ಬರ್ ಹಾಲು

ರಬ್ಬರ್ ಹಾಲನ್ನು ಟ್ರೇಗಳಲ್ಲಿ ಇರಿಸಿ ಶೀಟ್ ಮಾಡುವ ಪ್ರಕ್ರಿಯೆ


ಶೀಟ್ ಮಾಡುವ ಪ್ರಕ್ರಿಯೆ


ಸಿದ್ಧಗೊಂಡ ಶೀಟ್ಗಳು


ಒಣಗಲು ಹಾಕಿರುವ ಶೀಟ್ಗಳು

ರಬ್ಬರ್ ಫ್ಯಾಕ್ಟರಿಯಲ್ಲಿ ರಬ್ಬರ್ ಉತ್ಪನ್ನಗಳ ತಯಾರಿಕೆ

ರಬ್ಬರ್ ತೋಟ
ಬೆಳೆಗಾರರು ನಿರಾಶರಾಗುವುದು ಬೇಡ. ರಬ್ಬರ್ಗೆ ಭವಿಷ್ಯ ಇದ್ದು ಭರವಸೆಯ ಬೆಳೆಯಾಗಿದೆ. ಬೆಳೆಗಾರರು ವಿಶ್ವಾಸ ಕಳೆದುಕೊಳ್ಳಬೇಕಿಲ್ಲ. ಇಳುವರಿ ನೀಡುವ ರಬ್ಬರ್ ಮರಗಳನ್ನು ಕಡಿದು ಬೇರೆ ಬೆಳೆ ಬೆಳೆಯುವುದು ಬೇಡ– ಶ್ರೀಧರ ಜಿ.ಭಿಡೆ, ಅಧ್ಯಕ್ಷ, ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘ
ರಬ್ಬರ್ ಒಂದು ಕೃಷಿ ಉತ್ಪನ್ನ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದ್ದು ಅಲ್ಲಿನ ಸರ್ಕಾರವೂ ಪ್ರೋತ್ಸಾಹ ಧನ ನೀಡುತ್ತಿದೆ. ರಬ್ಬರ್ ಕಾರ್ಯಪಡೆಯೂ ಇದನ್ನು ಕೃಷಿ ಉತ್ಪನ್ನ ಎಂದು ಪರಿಗಣಿಸಲು ಹೇಳಿದೆ. ರಬ್ಬರ್ಗೆ ಬೆಂಬಲ ಬೆಲೆಯೊಂದಿಗೆ ವಿಮೆ ಒದಗಿಸಬೇಕು.– ಪ್ರೊ. ವಿಘ್ನೇಶ್ವರ ವರ್ಮುಡಿ, ಕೃಷಿ ಆರ್ಥಿಕ ತಜ್ಞ
ರಬ್ಬರ್ನಿಂದ ಹಲವು ಉಪಯೋಗಗಳಿವೆ. ತೋಟದಲ್ಲಿ ಜೇನು ಸಾಕಬಹುದು. ರಬ್ಬರ್ ಮರ ಸರಾಸರಿ 25 ವರ್ಷ ಇಳುವರಿ ಕೊಡುತ್ತದೆ. ಬಳಿಕ ಪೀಠೋಪಕರಣಕ್ಕೂ ಮರಗಳನ್ನು ಮಾರಾಟ ಮಾಡಬಹುದು. ಬೇರೆ ಬೆಳೆಯಲ್ಲಿ ಲಾಭ ಇದೆ ಎಂದು ಇದ್ದ ಮರವನ್ನು ಕಡಿಯಬಾರದು. ಡಯಾಸ್ ಚೆರಿಯನ್, ರಬ್ಬರ್ ಬೆಳೆಗಾರ ಕೆರ್ವಾಶೆ
ಉಜಿರೆಯಲ್ಲಿ ನಡೆದ ಸಮಾವೇಶದಲ್ಲಿ ಎಲ್ಲ ಬೆಳೆಗಾರರಿಗೂ ಅಭಯ ನೀಡಿದ್ದೇವೆ. ನಮ್ಮ ಮನವಿಗೆ ಸಂಸದರು ಶಾಸಕರು ಪೂರಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಯಾರೂ ಭ್ರಮನಿರಸನ ಆಗುವ ಅಗತ್ಯ ಇಲ್ಲ. ತಾಳ್ಮೆ ವಹಿಸಿ ಒಂದೆರಡು ವರ್ಷ ಕಾಯಬೇಕು.ಅನಂತಭಟ್ ಎಂ., ಬೆಳ್ತಂಗಡಿ ತಾಲ್ಲೂಕು ರಬ್ಬರ್ ಬೆಳೆಗಾರರ ಸಂಘದ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.