ಕಳೆದ ವರ್ಷ ರಾಮನಗರ ಮತ್ತು ಬೆಂಗಳೂರಿನಲ್ಲಿ ಅಬ್ಕಾರಿ ಇಲಾಖೆಯ ಚಾಲಕ ಸಿಬ್ಬಂದಿ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಆಗ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 3000ಕ್ಕೂ ಅಧಿಕ. ಅವುಗಳಲ್ಲಿ 300 ಅರ್ಜಿಗಳನ್ನು ಆಯ್ಕೆ ಮಾಡಿ ನೇಮಕದ ಪ್ರಕ್ರಿಯೆಯನ್ನು ನನೆಗುದಿಗೆ ಹಾಕಲಾಯಿತು.
ವರ್ಷ ಕಳೆದರೂ ಇಲಾಖೆ ಅರ್ಜಿದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ. ನೇಮಕಾತಿ ವಯೋಮಿತಿ ದಾಟಿದ ಮೇಲೆ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಇಲಾಖೆ ಶೀಘ್ರ ಗಮನ ಹರಿಸಲಿ.