<p>‘ಏನ್ರಲೆ ಹೊಸ ಸುದ್ದಿ? ಎಷ್ಟಾತು ಎಲೆಕ್ಷನ್ ಕಮಾಯಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.</p>.<p>‘ಈ ಗುಡ್ಡೆ ಸಖತ್ ರೊಕ್ಕ ಮಾಡ್ತದಾನೆ ಕಣ್ರಲೆ, ಚೊಂಬು-ಚಿಪ್ಪು ಎರಡೂ ಕಡೆಗೆ ಪ್ರಚಾರಕ್ಕೆ ಜನರನ್ನ ಕರ್ಕಂಡ್ ಹೋಗ್ತದಾನಂತೆ’ ಎಂದ ತೆಪರೇಸಿ.</p>.<p>‘ಹೌದೇನೋ? ಮತ್ತೆ ನನ್ ಹೋಟ್ಲು ಬಾಕಿ ತೀರ್ಸು’ ಎಂದಳು ಮಂಜಮ್ಮ.</p>.<p>‘ಎಲೆಕ್ಷನ್ ಮುಗೀಲಿ ತಡಿ, ತೀರುಸ್ತೀನಿ’ ಎಂದ ಗುಡ್ಡೆ, ‘ಅಲ್ರಲೆ, ಈ ಚೊಂಬಿಗೂ ಚಿಪ್ಪಿಗೂ ಏನ್ ವ್ಯತ್ಯಾಸ?’ ಎಂದ.</p>.<p>‘ಚೊಂಬನ್ನ ಸ್ನಾನಕ್ಕೂ ಸಂಡಾಸಿಗೂ ಎರಡಕ್ಕೂ ಬಳಸಬೋದು, ಆದ್ರೆ ಚಿಪ್ಪು ಹಂಗೆ ಮಾಡಕ್ಕೆ ಬರಲ್ಲ’ ದುಬ್ಬೀರ ನಕ್ಕ.</p>.<p>‘ಮತ್ತೆ ಈ ಪೆನ್ಡ್ರೈವ್ ಕತಿ ಏನು?’ ಕೊಟ್ರೇಶಿ ಕೊಕ್ಕೆ.</p>.<p>‘ಅಯ್ಯಪ್ಪ, ಸದ್ಯ ಅದರ ಸುದ್ದಿ ಬ್ಯಾಡ’ ತೆಪರೇಸಿ ತೆಲಿ ಒಗೆದ.</p>.<p>‘ಆಮೇಲೆ ಈ ಕೈನೋರು ಅಧಿಕಾರಕ್ಕೆ ಬಂದ್ರೆ ಅರ್ಧ ಆಸ್ತಿ ಕಿತ್ಕಂತಾರಂತಲ್ಲೋ ಗುಡ್ಡೆ... ಹುಷಾರು’ ಎಂದಳು ಮಂಜಮ್ಮ.</p>.<p>‘ಕಿತ್ಕಳ್ಳಲಿ ತಗಾ, ನನ್ ಹತ್ರ ಇರೋದೇ ಎರಡು ಪುಟುಗೋಸಿ’ ಗುಡ್ಡೆ ಕಿಸಕ್ಕೆಂದ.</p>.<p>‘ಅಷ್ಟರಲ್ಲಿ ತೆಪರೇಸಿ ಮೊಬೈಲ್ ರಿಂಗಾಯಿತು. ಕಾಲ್ ರಿಸೀವ್ ಮಾಡಿದ ತೆಪರೇಸಿ ‘ಏನು? ಹೌದಾ? ಯಾವಾಗ? ಥೋ ಎಂಥ ಕೆಟ್ ಸುದ್ದಿ ಹೇಳಿದ್ಯೋ ಮಾರಾಯ’ ಎನ್ನುತ್ತ ತೆಲಿ ಮೇಲೆ ಕೈ ಹೊತ್ತು ಕೂತ.</p>.<p>‘ದುಬ್ಬೀರನಿಗೆ ಗಾಬರಿ. ‘ಏನಾತೋ, ಏನಂತೆ, ಯಾರರೆ ಸತ್ರಾ?’ ಎಂದ. ಮಂಜಮ್ಮ, ಗುಡ್ಡೆ ಎಲ್ಲರಿಗೂ ಆತಂಕ.</p>.<p>‘ಕೆಟ್ ಸುದ್ದಿ ಕಣ್ರಲೆ, ಎಲೆಕ್ಷನ್ಗೆ ಮೂರು ದಿನ ಎಣ್ಣಿ ಅಂಗಡಿ ಬಂದ್ ಅಂತೆ’ ಎಂದ.</p>.<p>‘ಅಯ್ಯೋ ನಿನ್ ಮುಖ ಮುಚ್ಚ’ ಎನ್ನುತ್ತ ಸಿಟ್ಟಿಗೆದ್ದ ಮಂಜಮ್ಮ, ತೆಪರೇಸಿ ಮೇಲೆ ಒಂದು ಕಾಫಿ ಕಪ್ ಬೀಸಿ ಒಗೆದಳು. ಅದರಿಂದ ತಪ್ಪಿಸಿಕೊಂಡ ತೆಪರೇಸಿ, ‘ಸಾರಿ ಸಾರಿ’ ಎಂದ. ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಏನ್ರಲೆ ಹೊಸ ಸುದ್ದಿ? ಎಷ್ಟಾತು ಎಲೆಕ್ಷನ್ ಕಮಾಯಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.</p>.<p>‘ಈ ಗುಡ್ಡೆ ಸಖತ್ ರೊಕ್ಕ ಮಾಡ್ತದಾನೆ ಕಣ್ರಲೆ, ಚೊಂಬು-ಚಿಪ್ಪು ಎರಡೂ ಕಡೆಗೆ ಪ್ರಚಾರಕ್ಕೆ ಜನರನ್ನ ಕರ್ಕಂಡ್ ಹೋಗ್ತದಾನಂತೆ’ ಎಂದ ತೆಪರೇಸಿ.</p>.<p>‘ಹೌದೇನೋ? ಮತ್ತೆ ನನ್ ಹೋಟ್ಲು ಬಾಕಿ ತೀರ್ಸು’ ಎಂದಳು ಮಂಜಮ್ಮ.</p>.<p>‘ಎಲೆಕ್ಷನ್ ಮುಗೀಲಿ ತಡಿ, ತೀರುಸ್ತೀನಿ’ ಎಂದ ಗುಡ್ಡೆ, ‘ಅಲ್ರಲೆ, ಈ ಚೊಂಬಿಗೂ ಚಿಪ್ಪಿಗೂ ಏನ್ ವ್ಯತ್ಯಾಸ?’ ಎಂದ.</p>.<p>‘ಚೊಂಬನ್ನ ಸ್ನಾನಕ್ಕೂ ಸಂಡಾಸಿಗೂ ಎರಡಕ್ಕೂ ಬಳಸಬೋದು, ಆದ್ರೆ ಚಿಪ್ಪು ಹಂಗೆ ಮಾಡಕ್ಕೆ ಬರಲ್ಲ’ ದುಬ್ಬೀರ ನಕ್ಕ.</p>.<p>‘ಮತ್ತೆ ಈ ಪೆನ್ಡ್ರೈವ್ ಕತಿ ಏನು?’ ಕೊಟ್ರೇಶಿ ಕೊಕ್ಕೆ.</p>.<p>‘ಅಯ್ಯಪ್ಪ, ಸದ್ಯ ಅದರ ಸುದ್ದಿ ಬ್ಯಾಡ’ ತೆಪರೇಸಿ ತೆಲಿ ಒಗೆದ.</p>.<p>‘ಆಮೇಲೆ ಈ ಕೈನೋರು ಅಧಿಕಾರಕ್ಕೆ ಬಂದ್ರೆ ಅರ್ಧ ಆಸ್ತಿ ಕಿತ್ಕಂತಾರಂತಲ್ಲೋ ಗುಡ್ಡೆ... ಹುಷಾರು’ ಎಂದಳು ಮಂಜಮ್ಮ.</p>.<p>‘ಕಿತ್ಕಳ್ಳಲಿ ತಗಾ, ನನ್ ಹತ್ರ ಇರೋದೇ ಎರಡು ಪುಟುಗೋಸಿ’ ಗುಡ್ಡೆ ಕಿಸಕ್ಕೆಂದ.</p>.<p>‘ಅಷ್ಟರಲ್ಲಿ ತೆಪರೇಸಿ ಮೊಬೈಲ್ ರಿಂಗಾಯಿತು. ಕಾಲ್ ರಿಸೀವ್ ಮಾಡಿದ ತೆಪರೇಸಿ ‘ಏನು? ಹೌದಾ? ಯಾವಾಗ? ಥೋ ಎಂಥ ಕೆಟ್ ಸುದ್ದಿ ಹೇಳಿದ್ಯೋ ಮಾರಾಯ’ ಎನ್ನುತ್ತ ತೆಲಿ ಮೇಲೆ ಕೈ ಹೊತ್ತು ಕೂತ.</p>.<p>‘ದುಬ್ಬೀರನಿಗೆ ಗಾಬರಿ. ‘ಏನಾತೋ, ಏನಂತೆ, ಯಾರರೆ ಸತ್ರಾ?’ ಎಂದ. ಮಂಜಮ್ಮ, ಗುಡ್ಡೆ ಎಲ್ಲರಿಗೂ ಆತಂಕ.</p>.<p>‘ಕೆಟ್ ಸುದ್ದಿ ಕಣ್ರಲೆ, ಎಲೆಕ್ಷನ್ಗೆ ಮೂರು ದಿನ ಎಣ್ಣಿ ಅಂಗಡಿ ಬಂದ್ ಅಂತೆ’ ಎಂದ.</p>.<p>‘ಅಯ್ಯೋ ನಿನ್ ಮುಖ ಮುಚ್ಚ’ ಎನ್ನುತ್ತ ಸಿಟ್ಟಿಗೆದ್ದ ಮಂಜಮ್ಮ, ತೆಪರೇಸಿ ಮೇಲೆ ಒಂದು ಕಾಫಿ ಕಪ್ ಬೀಸಿ ಒಗೆದಳು. ಅದರಿಂದ ತಪ್ಪಿಸಿಕೊಂಡ ತೆಪರೇಸಿ, ‘ಸಾರಿ ಸಾರಿ’ ಎಂದ. ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>