<p>‘ಅಲ್ಲ, ನರೇಗಾ ಯೋಜನೆ ಹೆಸರಲ್ಲಿದ್ದ ಮಹಾತ್ಮ ಗಾಂಧಿ ಹೆಸರು ತೆಗೆದು ಹಾಕೋದು ತಪ್ಪಲ್ವಾ?’ ಹರಟೆಕಟ್ಟೆಯಲ್ಲಿ ದುಬ್ಬೀರ ಆಕ್ಷೇಪಿಸಿದ.</p>.<p>‘ಅದೂ... ಗಾಂಧಿ ಹೆಸರು ತೆಗೆದು ರಾಮನ ಹೆಸರು ಹಾಕ್ತಾರಂತೆ. ಹೆಂಗೂ ಗಾಂಧಿಗೆ ರಾಮ ಅಂದ್ರೆ ಬಾಳ ಭಕ್ತಿಯಲ್ವಾ? ಸಾಯೋವಾಗ ‘ಹೇ ರಾಮ್’ ಅನ್ಲಿಲ್ವಾ?’ ಚಾದಂಗಡಿ ಮಂಜಮ್ಮ ಸಮರ್ಥಿಸಿಕೊಂಡಳು.</p>.<p>‘ನಿನ್ತೆಲಿ, ಗಾಂಧಿ ರಾಮನೇ ಬೇರೆ, ನಿಮ್ ಕಮಲ ಪಕ್ಷದ ರಾಮನೇ ಬೇರೆ. ನೀವು ಜಿ ರಾಮ್ ಜಿ ಅಂತ ಮಾಡ್ಕಂಡ್ರೆ ನಾವು ನಮ್ ರಾಜ್ಯದಲ್ಲಿ ‘ಎಸ್ ರಾಮ್ ಜಿ’ ಅಂತ ಮಾಡ್ಕಂತೀವಿ...’ ಗುಡ್ಡೆಗೆ ಸಿಟ್ಟು ಬಂತು.</p>.<p>‘ಎಸ್ ರಾಮ್ ಜಿ’ ಅಂದ್ರೆ?’</p>.<p>‘ಸಿದ್ದರಾಮ್ ಜಿ ಅಂತ... ಅಷ್ಟೇ ಅಲ್ಲ, ರಾಜಭವನಕ್ಕೆ ಲೋಕಭವನ ಅಂತಾನೂ ಹೆಸರಿಡಲ್ಲ, ಏನ್ ಮಾಡ್ಕಂತೀರಿ?’</p>.<p>‘ಕೇಂದ್ರದ ಅನುದಾನ ನಿಲ್ಲಿಸ್ತೀವಿ, ಆಗೇನ್ಮಾಡ್ತೀರಿ?’</p>.<p>‘ಈಗೇನ್ ಕೊಡ್ತಾ ಇದೀರಾ? ಎಷ್ಟ್ ಕೊಟ್ಟಿದೀರಿ?'</p>.<p>‘ನೀವೂ ಗೃಹಲಕ್ಷ್ಮಿ ಹಣ ಎರಡು ತಿಂಗಳು ಕೊಟ್ಟಿದೀರಾ?’ ಮಂಜಮ್ಮಗೂ ಸಿಟ್ಟು ಬಂತು.</p>.<p>‘ಏಯ್, ನಿಮ್ ಜಗಳ ಸಾಕು, ಬೇರೇನರೆ ಮಾತಾಡ್ರಿ, ಅದ್ಯಾರೋ ಮೆಸ್ಸಿ ಅಂತಲ್ಲ, ಅವನ ಜತಿ ಫೋಟೊ ತೆಗೆಸ್ಕಳಾಕೆ ಹತ್ತು ಲಕ್ಷ ರೂಪಾಯಂತೆ ಹೌದಾ?’ ಎಂದು ದುಬ್ಬೀರ ಮಾತು ಬದಲಿಸಿದ.</p>.<p>‘ಅವ್ನು ವರ್ಲ್ಡ್ ಫೇಮಸ್ ಫುಟ್ಬಾಲ್ ಆಟಗಾರ. ಬಾಳ ಚೆನ್ನಾಗಿ ಬಾಲ್ ಒದೀತಾನೆ...’ ತೆಪರೇಸಿ ಹೇಳಿದ.</p>.<p>‘ಅಲ್ಲ, ಅವನ ಕೈ ಕುಲುಕೋಕೆ ಒಂದು ಕೋಟಿ ರೂಪಾಯಂತೆ?’ ಕೊಟ್ರೇಶಿಗೆ ಆಶ್ಚರ್ಯ.</p>.<p>‘ಲೇಯ್, ಅದ್ಯಾವ ದೊಡ್ಡ ವಿಷ್ಯಲೆ? ಅವ್ನು ಕೈ ಕುಲುಕೋಕೆ ಒಂದು ಕೋಟಿ ತಗಂಡಿರಬೋದು, ನಮ್ ಎಮ್ಮೆಲ್ಲೆಗಳು ಅವರು ಗೆದ್ದ ಪಕ್ಷಕ್ಕೆ ‘ಕೈ ಕೊಡೋಕೆ’ ₹50ರಿಂದ ₹60 ಕೋಟಿ ತಗಂಡಿಲ್ವಾ? ತಗಂಡು ಬೇರೆ ಪಕ್ಷ ಸೇರ್ಕಂಡಿಲ್ವಾ?’ ಗುಡ್ಡೆ ವಾದಿಸಿದ.</p>.<p>‘ಯೂ ಆರ್ ಎಜ್ಜಾಟ್ ಲೀ ಕರೆಕ್ಟ್ ಗುಡ್ಡೆಜೀ’ ಎಂದ ಕೊಟ್ರ.</p>.<p>ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅಲ್ಲ, ನರೇಗಾ ಯೋಜನೆ ಹೆಸರಲ್ಲಿದ್ದ ಮಹಾತ್ಮ ಗಾಂಧಿ ಹೆಸರು ತೆಗೆದು ಹಾಕೋದು ತಪ್ಪಲ್ವಾ?’ ಹರಟೆಕಟ್ಟೆಯಲ್ಲಿ ದುಬ್ಬೀರ ಆಕ್ಷೇಪಿಸಿದ.</p>.<p>‘ಅದೂ... ಗಾಂಧಿ ಹೆಸರು ತೆಗೆದು ರಾಮನ ಹೆಸರು ಹಾಕ್ತಾರಂತೆ. ಹೆಂಗೂ ಗಾಂಧಿಗೆ ರಾಮ ಅಂದ್ರೆ ಬಾಳ ಭಕ್ತಿಯಲ್ವಾ? ಸಾಯೋವಾಗ ‘ಹೇ ರಾಮ್’ ಅನ್ಲಿಲ್ವಾ?’ ಚಾದಂಗಡಿ ಮಂಜಮ್ಮ ಸಮರ್ಥಿಸಿಕೊಂಡಳು.</p>.<p>‘ನಿನ್ತೆಲಿ, ಗಾಂಧಿ ರಾಮನೇ ಬೇರೆ, ನಿಮ್ ಕಮಲ ಪಕ್ಷದ ರಾಮನೇ ಬೇರೆ. ನೀವು ಜಿ ರಾಮ್ ಜಿ ಅಂತ ಮಾಡ್ಕಂಡ್ರೆ ನಾವು ನಮ್ ರಾಜ್ಯದಲ್ಲಿ ‘ಎಸ್ ರಾಮ್ ಜಿ’ ಅಂತ ಮಾಡ್ಕಂತೀವಿ...’ ಗುಡ್ಡೆಗೆ ಸಿಟ್ಟು ಬಂತು.</p>.<p>‘ಎಸ್ ರಾಮ್ ಜಿ’ ಅಂದ್ರೆ?’</p>.<p>‘ಸಿದ್ದರಾಮ್ ಜಿ ಅಂತ... ಅಷ್ಟೇ ಅಲ್ಲ, ರಾಜಭವನಕ್ಕೆ ಲೋಕಭವನ ಅಂತಾನೂ ಹೆಸರಿಡಲ್ಲ, ಏನ್ ಮಾಡ್ಕಂತೀರಿ?’</p>.<p>‘ಕೇಂದ್ರದ ಅನುದಾನ ನಿಲ್ಲಿಸ್ತೀವಿ, ಆಗೇನ್ಮಾಡ್ತೀರಿ?’</p>.<p>‘ಈಗೇನ್ ಕೊಡ್ತಾ ಇದೀರಾ? ಎಷ್ಟ್ ಕೊಟ್ಟಿದೀರಿ?'</p>.<p>‘ನೀವೂ ಗೃಹಲಕ್ಷ್ಮಿ ಹಣ ಎರಡು ತಿಂಗಳು ಕೊಟ್ಟಿದೀರಾ?’ ಮಂಜಮ್ಮಗೂ ಸಿಟ್ಟು ಬಂತು.</p>.<p>‘ಏಯ್, ನಿಮ್ ಜಗಳ ಸಾಕು, ಬೇರೇನರೆ ಮಾತಾಡ್ರಿ, ಅದ್ಯಾರೋ ಮೆಸ್ಸಿ ಅಂತಲ್ಲ, ಅವನ ಜತಿ ಫೋಟೊ ತೆಗೆಸ್ಕಳಾಕೆ ಹತ್ತು ಲಕ್ಷ ರೂಪಾಯಂತೆ ಹೌದಾ?’ ಎಂದು ದುಬ್ಬೀರ ಮಾತು ಬದಲಿಸಿದ.</p>.<p>‘ಅವ್ನು ವರ್ಲ್ಡ್ ಫೇಮಸ್ ಫುಟ್ಬಾಲ್ ಆಟಗಾರ. ಬಾಳ ಚೆನ್ನಾಗಿ ಬಾಲ್ ಒದೀತಾನೆ...’ ತೆಪರೇಸಿ ಹೇಳಿದ.</p>.<p>‘ಅಲ್ಲ, ಅವನ ಕೈ ಕುಲುಕೋಕೆ ಒಂದು ಕೋಟಿ ರೂಪಾಯಂತೆ?’ ಕೊಟ್ರೇಶಿಗೆ ಆಶ್ಚರ್ಯ.</p>.<p>‘ಲೇಯ್, ಅದ್ಯಾವ ದೊಡ್ಡ ವಿಷ್ಯಲೆ? ಅವ್ನು ಕೈ ಕುಲುಕೋಕೆ ಒಂದು ಕೋಟಿ ತಗಂಡಿರಬೋದು, ನಮ್ ಎಮ್ಮೆಲ್ಲೆಗಳು ಅವರು ಗೆದ್ದ ಪಕ್ಷಕ್ಕೆ ‘ಕೈ ಕೊಡೋಕೆ’ ₹50ರಿಂದ ₹60 ಕೋಟಿ ತಗಂಡಿಲ್ವಾ? ತಗಂಡು ಬೇರೆ ಪಕ್ಷ ಸೇರ್ಕಂಡಿಲ್ವಾ?’ ಗುಡ್ಡೆ ವಾದಿಸಿದ.</p>.<p>‘ಯೂ ಆರ್ ಎಜ್ಜಾಟ್ ಲೀ ಕರೆಕ್ಟ್ ಗುಡ್ಡೆಜೀ’ ಎಂದ ಕೊಟ್ರ.</p>.<p>ಎಲ್ಲರೂ ಗೊಳ್ಳಂತ ನಕ್ಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>