ಕಳೆದ ವರ್ಷವೇ ಬರ ಅನುಭವಿಸಿದ್ದೇವೆ, ಈ ವರ್ಷವೂ ಪರಿಸ್ಥಿತಿ ಭೀಕರವಾಗಿದೆ, ನಾವು ಹೇಗೋ ಹೊಟ್ಟೆ ತುಂಬಿಸಿಕೊಳ್ಳುತ್ತೇವೆ, ಮೂಕಪ್ರಾಣಿಗಳು ಮೇವಿಲ್ಲದೇ ಸೊರಗಿವೆ. ಸಾಕಿದ ಎತ್ತು, ಹಸು ಕರುಗಳು ಉಪವಾಸದಿಂದ ಮುಖ ನೋಡುತ್ತಿದ್ದರೆ ಕೈಯಲ್ಲಿನ ತುತ್ತು ಗಂಟಲಿಗೆ ಇಳಿಯುವುದಿಲ್ಲ. ಎತ್ತು, ದನಕರುಗಳು ಇಲ್ಲವೆಂದರೆ ನಮ್ಮ ಕುಟುಂಬಗಳೇ ನಾಶವಾದಂತೆ. ಬದುಕಿನ ಆಧಾರವೇ ಇಲ್ಲದಿರುವ ನಾವು ಇದ್ದರೇನು ಪ್ರಯೋಜನ? ಎಂದು ರೈತರು ಆಕ್ರೋಶವ್ಯಕ್ತಪಡಿಸಿದರು.