ಏಳುದಿನಗಳ ಕಾಲ ತಿರುಗಿದರೂ ದವಸ ದೊರೆಯದಿದ್ದರಿಂದ ಹುಣ್ಣಿಮೆಯ ದಿನ ಕೈಲಾಸಕ್ಕೆ ಹಿಂತಿರುಗಿ ಇಲ್ಲಿನ ಸ್ಥಿತಿಯನ್ನು ಶಿವನಿಗೆ ವಿವರಿಸಿ ಮಳೆ ಬರುವಂತೆ ಮಾಡುತ್ತಾನೆ. ಆದ್ದರಿಂದ, ಜೋಕುಮಾರ ಸ್ವಾಮಿಯ ಆಚರಣೆಯ ನಂತರ ಮಳೆ ಬಂದೇ ಬರುತ್ತದೆ ಎನ್ನುವ ನಂಬಿಕೆ ಇಂದಿಗೂ ಗ್ರಾಮೀಣರಲ್ಲಿದೆ ಎಂದು ಸಂಪ್ರದಾಯದ ಬಗ್ಗೆ ಹೇಳುತ್ತಾರೆ ಅಬ್ಬೇನಹಳ್ಳಿಯ ಹಾಲಪ್ಪ ಜೋಕುಮಾರ ಸ್ವಾಮಿಗೆ ಭೂಮಿಯಲ್ಲಿ ಏಳು ದಿನಗಳು ಮಾತ್ರ ಆಯುಷ್ಯ ವಿರುವುದರಿಂದ ವಾರದ ಜೋಕುಮಾರ ಸ್ವಾಮಿಯೆಂದು ಕರೆಯುವುದು ವಾಡಿಕೆ.
ಬಾರಕ ಜನಾಂಗ ಬಿದಿರಿನ ಪುಟ್ಟಿಯಲ್ಲಿ ಬೆಣ್ಣೆ, ಹಾಗೂ ಬೇವಿನ ಸೊಪ್ಪಿನಿಂದ ಅಲಂಕರಿಸಿದ ಸ್ವಾಮಿಯನ್ನು ಹೊತ್ತು ಹಳ್ಳಿಗಳಲ್ಲಿ ಮನೆಗಳಿಗೆ ತೆರಳಿ ಬೆಣ್ಣೆ, ಧಾನ್ಯಗಳನ್ನು ಸಂಗ್ರಹಿಸಿ ಬಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಯ ದಿನ ಜೋಕುಮಾರ ಸ್ವಾಮಿಯನ್ನು ಕೆರೆಯಲ್ಲಿ ವಿಸರ್ಜಿಸುತ್ತಾರೆ ಎಂದು ಗ್ರಾಮದ ಸುಮಂಗಳಮ್ಮ ವಿವರಿಸಿದರು.