ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಪ್ಪ ಮುಳುಗಿ ಐವರ ಸಾವು

Last Updated 19 ಡಿಸೆಂಬರ್ 2010, 11:00 IST
ಅಕ್ಷರ ಗಾತ್ರ

ಕಲಘಟಗಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕಂದ್ಲಿ ಗ್ರಾಮದ ತಟ್ಟಿಹಳ್ಳ ಜಲಾಶಯದಲ್ಲಿ ತೆಪ್ಪ ಮುಳುಗಿ ಒಂದೇ ಕುಟುಂಬದ ಮೂವರು ಸೇರಿ ಐವರು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ 6 ಗಂಟೆ ವೇಳೆಗೆ ಸಂಭವಿಸಿದೆ.

ಸತ್ತವರಲ್ಲಿ ಇಬ್ಬರು ಮಹಿಳೆಯರು ಹಾಗೂ ಮೂವರು ವಿದ್ಯಾರ್ಥಿನಿಯರು. ಒಬ್ಬ ವಿದ್ಯಾರ್ಥಿ ಈಜಿ ಪಾರಾಗಿದ್ದಾನೆ. ತಟ್ಟಿಹಳ್ಳ ಜಲಾಯಶದ ಒಂದು ಬದಿಯಲ್ಲಿರುವ ಹೊಲದಲ್ಲಿನ ಹತ್ತಿಯ ಫಸಲನ್ನು ಬಿಡಿಸಿಕೊಂಡು ತೆಪ್ಪದಲ್ಲಿ ತೆಗೆದುಕೊಂಡು ಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಮೃತರನ್ನು ಜಾಯವ್ವ ಬಾಂದೇಕರ (40), ಸೇವಂತಿ ಬಾಬರಿ (35), ವಿದ್ಯಾರ್ಥಿನಿಯರಾದ ಗಿರಿಜಾ ಬಾಂದೇಕರ (13), ಚನ್ನವ್ವ ಬಾಬರಿ (14), ಅಕ್ಷತಾ ಬಾಂದೇಕರ (13) ಎಂದು ಗುರುತಿಸಲಾಗಿದೆ.  ಕೃಷ್ಣಾ ಬಾಂದೇಕರ ಎಂಬ ಬಾಲಕ ಈಜಿ ದಡ ಸೇರಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT