ಯಾರೋ ಎಲ್ಲೋ ಕುಳಿತು ಮಾಡಿದ ಚಿತ್ರವನ್ನು ಮತ್ತೊಬ್ಬರ ಮೂಲಕ ಪರದೆಯ ಮೇಲೆ ನಾವು ನೋಡುತ್ತೇವೆ. ಆದರೆ, ನಾಟಕದಲ್ಲಿ ಹೀಗಾಗುವುದಿಲ್ಲ. ಕಲಾವಿದರು ನೇರವಾಗಿ ಜನರ ಮುಂದೆ ಅಭಿನಯಿಸುತ್ತಾರೆ. ಹೀಗಾಗಿ ಅಲ್ಲಿ ಜೀವಂತಿಕೆ ಇರುತ್ತದೆ. ಅಂತೆಯೇ, ರಂಗಭೂಮಿ ಕಲಾವಿದರು ಜನಪ್ರಿಯವಾದಷ್ಟೂ ಜನರ ಮಧ್ಯೆಯೇ ಇರುತ್ತಾರೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಇಂದಿನ ಒತ್ತಡದ ಜೀವನದಿಂದ ಹೊರಬರಲು ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯ. ನಾಟಕಗಳನ್ನು ನೋಡಿದರೆ ಮನಸ್ಸು ಅರಳುತ್ತದೆ ಎಂದರು. ಪತ್ರಕರ್ತ ಬಿ.ಎಸ್. ಷಣ್ಮುಖಪ್ಪ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಶಿವರುದ್ರಪ್ಪ, ರಂಗಚಿಂತಕ ಮಲ್ಲಿಕಾರ್ಜುನ ಕಡಕೋಳ, ಕಂಚಿಕೆರೆ ಶಿವಣ್ಣ, ನಾಟ್ಯ ಸಂಘದ ಮಾಲೀಕ ಅಯ್ಯಣ್ಣಸ್ವಾಮಿ ಹಿರೇಮಠ, ಗುರುಸಿದ್ದಯ್ಯ ಸ್ವಾಮಿ, ರಮೇಶ್, ಮೃತ್ಯುಂಜಯಸ್ವಾಮಿ ಪಾಲ್ಗೊಂಡಿದ್ದರು. ನಂತರ, `ಕಾಳಿಂಗಸರ್ಪ~ ನಾಟಕ ಪ್ರದರ್ಶನಗೊಂಡಿತು.