ಬೆಂಗಳೂರು: ಬಹು ನಿರೀಕ್ಷಿತವಾಗಿ ಕುತೂಹಲದಿಂದ ಕಾಯುತ್ತಿರುವ ಟಾಟಾ ಕಲ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ವರ್ಲ್ಡ್ 10 ಕೆ ಬೆಂಗಳೂರು ಮ್ಯಾರಥಾನ್ಗೆ ಉದ್ಯಾನ ನಗರಿ ಸಜ್ಜುಗೊಂಡಿದೆ.
ಭಾನುವಾರ ಮ್ಯಾರಥಾನ್ ಆರಂಭವಾಗುವ ನಗರದ ಕಂಠೀರವ ಕ್ರೀಡಾಂಗಣವನ್ನು ಅಲಂಕರಿಸಲಾಗಿದೆ. ವಿವಿಧ ಟ್ರ್ಯಾಕ್ಗಳನ್ನು ಸಹ ನಿರ್ಮಿಸಲಾಗಿದೆ. ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ದ ಭಾರತದ ಸ್ಪರ್ಧಿಗಳು ಈ ವರ್ಷವು ಪ್ರಶಸ್ತಿಯ ನೀರಿಕ್ಷೆಯಲ್ಲಿದ್ದಾರೆ. ವಿವಿಧ ದೇಶಗಳ ಸ್ಪರ್ಧಿಗಳು ಈಗಾಗಲೇ ಇಲ್ಲಿಗೆ ಆಗಮಿಸಿದ್ದು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಬೆಳಿಗ್ಗೆ 7.30ಕ್ಕೆ ಮ್ಯಾರಥಾನ್ಗೆ ಚಾಲನೆ ಸಿಗಲಿದೆ. ಕಳೆದ ಬಾರಿಯ ಚಾಂಪಿಯನ್ ಸುನಿಲ್ ಕುಮಾರ್ ವಿಜೇತ ಸುರೇಶ್ ಕುಮಾರ್ ಪಾಲ್ಗೊಳ್ಳಲಿದ್ದಾರೆ.