ಕುಂಜಾರುಗಿರಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಬಾಹ್ಮಣರಲ್ಲವೆಂಬ ಕಾರಣವನ್ನು ಮುಂದೆ ಮಾಡಿ, ಪಂಕ್ತಿಯಲ್ಲಿ ಊಟಕ್ಕೆ ಕುಳಿತವರನ್ನು ಮೇಲೆಬ್ಬಿಸಿ ಕಳುಹಿಸಿದ ಪ್ರಸಂಗವು ಅತ್ಯಂತ ಹೇಯ ಘಟನೆಯಾಗಿದೆ. ದೇವಸ್ಥಾನದವರು ಹೇಳುವಂತೆ ಅದು ಹರಕೆಯ ಊಟದ ಕಕ್ಷೆಯೇ ಆಗಿದ್ದುದು ನಿಜವಾಗಿದ್ದರೆ, ಆ ನಾಲ್ಕು ಜನರಿಗೆ `ನೀವು ಮತ್ತೊಬ್ಬರ ಹರಕೆಯ ಊಟಕ್ಕಾಗಿ ಬಂದವರಲ್ಲದಿದ್ದರೆ, ದೇವಸ್ಥಾನದ ಸಹ ಭೋಜನದ ಕಕ್ಷೆಯಲ್ಲೇ ಕುಳಿತುಕೊಳ್ಳಿ, ಇಲ್ಲಿ ಬೇಡ~ ಎಂದು ಹೇಳುವ ಸೌಜನ್ಯ ದೇವಸ್ಥಾನದವರಿಗೆ ಇರಬೇಕಾಗಿತ್ತು.