ನವದೆಹಲಿ (ಪಿಟಿಐ): ರೈಲ್ವೇ ಸಚಿವ ಪವನ್ ಕುಮಾರ್ ಬನ್ಸಾಲ್ ಮಂಡಿಸಿದ 2013ನೇ ಸಾಲಿನ ರೈಲ್ವೇ ಬಜೆಟ್ನಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ಸಿಕ್ಕಿಲ್ಲ. ಪ್ರತಿ ವರ್ಷದಂತೆ ಈ ಭಾರಿಯು ಬಜೆಟ್ನಲ್ಲಿ ರಾಜ್ಯವನ್ನು ನಿರ್ಲಕ್ಷಿಸಲಾಗಿದೆ.
ಮುಖ್ಯಾಂಶಗಳು
* ಬೆಂಗಳೂರಿನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ.
* ರಾಜ್ಯಕ್ಕೆ ಎರಡು ಎಕ್ಸ್ಪ್ರೆಸ್ ರೈಲುಗಳು
*ಹುಬ್ಬಳ್ಳಿ-ಮುಂಬೈ ಹಾಗೂ ಬೆಂಗಳೂರು- ಮಂಗಳೂರು ಮತ್ತು ಜಬಲ್ಪುರ್-ಬೆಂಗಳೂರು- ಮೈಸೂರು ಹಾಗೂ ಮಂಗಳೂರು- ಕಾಚಿಗುಡ ಎಕ್ಸ್ಪ್ರೆಸ್ ರೈಲು(ವಾರಕ್ಕೆ ಒಂದು ಸಲ)
* ಕೋಲಾರದಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ನಿರ್ಮಾಣ
* ಚಿಕ್ಕಬಳ್ಳಾಪುರ-ಗೌರಿಬಿದನೂರು ಹಾಗೂ ಶ್ರೀನಿವಾಸಪುರ- ಮದನಪಲ್ಲಿಗೆ ಹೊಸ ರೈಲು ಮಾರ್ಗ
* ಚಿಕ್ಕಬಳ್ಳಾಪುರ- ಪುಟ್ಟಪರ್ತಿಗೆ ಹೊಸ ರೈಲು