ಮಠಗಳಿಗೆ ಹಣ ಕೊಟ್ಟರೆ ತಪ್ಪೇನು? ಎಂದಿದ್ದಾರೆ ವಿರೋಧ ಪಕ್ಷದ ಉಪನಾಯಕ ಟಿ. ಬಿ. ಜಯಚಂದ್ರ (ಪ್ರ. ವಾ. ಫೆ. 13). ನಮ್ಮ ಬಹುತೇಕ ಮಠಗಳು ಜಾತಿ ವ್ಯವಸ್ಥೆಯ ಕೇಂದ್ರಗಳಾಗಿರುವುದು ಸ್ಪಷ್ಟವಾಗಿದೆ.
ಮಠಗಳಿಗೆ ಹಣ ನೀಡುವುದೆಂದರೆ ಜಾತಿ ವ್ಯವಸ್ಥೆಗೆ ನೀರೆರೆದಂತೆ. ಇದರ ವಿರುದ್ಧ ಬುದ್ಧ, ಬಸವ, ಅಂಬೇಡ್ಕರ್ ಹೋರಾಡಿದ ಉದಾಹರಣೆಗಳು ನಮ್ಮ ಮುಂದಿವೆ. ಜಯಚಂದ್ರರ ಹೇಳಿಕೆಯೂ ಸಂವಿಧಾನ ವಿರೋಧಿಯಾಗಿದೆ.