ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹದ ಬಳಿಕ ನಿರಂತರವಾಗಿ ಜನರೊಂದಿಗೆ ಬೆರೆತಿದ್ದ ಹಜಾರೆ ದಣಿವಿನಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯವಿತ್ತು ಎಂದು ಅವರ ಆಪ್ತರಾದ ದತ್ತಾ ಆವಾರಿ ಮತ್ತು ಸುರೇಶ ಪಥಾರೆ ಅವರು ತಿಳಿಸಿದ್ದಾರೆ. ಮೌನವೃತ ಆರಂಭವಾದ ಬಳಿಕ ಸಾವಿರಕ್ಕೂ ಹೆಚ್ಚು ಜನರು ಪದ್ಮಾವತಿ ದೇವಸ್ಥಾನ ಆವರಣಕ್ಕೆ ಭೇಟಿ ನೀಡಿದ್ದಾರೆ.