ಹುಬ್ಬಳ್ಳಿ: ಹತ್ತಿ ಖರೀದಿದಾರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ನವೆಂಬರ್ 10ರಿಂದ ರಾಜ್ಯದಲ್ಲಿ ಹತ್ತಿ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ಹತ್ತಿ ಸಂಘ ಭಾನುವಾರ ಇಲ್ಲಿ ಎಚ್ಚರಿಸಿದೆ.
`ಹತ್ತಿ ಖರೀದಿಯ ಮೇಲೆ ಶೇ. 5ರಷ್ಟು ತೆರಿಗೆಯನ್ನು ವಿಧಿಸಲಾಗುತ್ತಿದೆ. ಇದಲ್ಲದೇ ರಾಜ್ಯದಲ್ಲಿ ಮಾರುಕಟ್ಟೆ ಶುಲ್ಕ ಶೇ.1.5ರಷ್ಟಿದೆ. ಹೀಗಾಗಿ ಸಗಟು ಖರೀದಿದಾರರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಖರೀದಿ ಮೇಲೆ ವಿಧಿಸಲಾಗಿರುವ ತೆರಿಗೆಯನ್ನು ಶೇ. 2ಕ್ಕೆ ಇಳಿಸಬೇಕು ಎಂದು ಆಗ್ರಹಿಸಿದೆ.