ಬೆಂಗಳೂರು: ಉತ್ತಮ ಹೋರಾಟ ತೋರಿದ ಆರ್ಡಬ್ಲ್ಯುಎಫ್ ತಂಡದವರು ಕೆಎಸ್ಎಚ್ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಗೆಲುವು ಸಾಧಿಸಿದರು.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್ಡಬ್ಲ್ಯುಎಫ್ ತಂಡ 4-2ಗೋಲುಗಳಿಂದ ಎಂಇಜಿ ಬಾಯ್ಸ ತಂಡವನ್ನು ಸೋಲಿಸಿತು.
ಸುಧೀರ್ ದೀಕ್ಷಿತ್ (17), ಮೊಹಮ್ಮದ್ ಇಮ್ರಾನ್ (39), ಅರುಣ್ ರವಿ (45) ಹಾಗೂ ರವಿ ಕುಮಾರ್ (58) ಗೋಲು ಗಳಿಸಿ ಆರ್ಡಬ್ಲ್ಯುಎಫ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹುಬ್ಬಳ್ಳಿಯ ಸದರ್ನ್ ವೆಸ್ಟರ್ನ್ ರೈಲ್ವೆ ತಂಡ 3-1ಗೋಲುಗಳಿಂದ ಸೀನರ್ಜಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿತು.
ಮಂಗಳವಾರದ ಪಂದ್ಯಗಳು: ಆರ್ಡಬ್ಲುಎಫ್-ಎಸ್ಡಬ್ಲ್ಯುಆರ್ (ಸಂಜೆ 4ಗಂಟೆಗೆ).