ಇತ್ತೀಚೆಗೆ ನಡೆದ ಷೇರುದಾರರ ವಿಶೇಷ ಸಾಮಾನ್ಯ ಸಭೆಯಲ್ಲಿ ಸಂಸ್ಥಾಪಕ ರವೀಂದ್ರನ್ ಸೇರಿದಂತೆ ಅವರ ಕುಟುಂಬಸ್ಥರನ್ನು ಆಡಳಿತ ಮಂಡಳಿಯಿಂದ ಪದಚ್ಯುತಿಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೆ, ಆರು ಪ್ರಮುಖ ಹೂಡಿಕೆದಾರರ ಪೈಕಿ ನಾಲ್ವರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಬೆಂಗಳೂರು ಘಟಕದ ಮೊರೆ ಹೋಗಿದ್ದು, ಆಡಳಿತ ಮಂಡಳಿಯನ್ನು ಪುನರ್ ರಚಿಸುವಂತೆ ಕೋರಿದ್ದಾರೆ.