ಹೊಸೂರು ಮುಖ್ಯರಸ್ತೆಯಲ್ಲಿರುವ ರೂಪೇನ ಅಗ್ರಹಾರದಲ್ಲಿ ಸ್ಥಾಪಿಸಿರುವ ಈ ‘ಸಿಒಇ’ ಕೇಂದ್ರವನ್ನು ಬುಧವಾರ ಉದ್ಘಾಟಿಸಲಾಯಿತು. ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಎಲ್ಒಟಿಯಂತಹ ತಂತ್ರಜ್ಞಾನಗಳ ನಿರ್ವಹಣೆಗೆ ಈ ಕೇಂದ್ರ ಗಮನಹರಿಸಲಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ಠಾಕೂರ್ ಕೇಂದ್ರ ಉದ್ಘಾಟಿಸಿದರು.