ಇದಕ್ಕೆ ಕೆಲವು ಪ್ರಮುಖ ಹೂಡಿಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಭೆಗೆ ಅನುಮತಿ ನೀಡದಂತೆ ತಡೆ ಕೋರಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್ಸಿಎಲ್ಟಿ) ಬೆಂಗಳೂರು ಘಟಕದ ಮೊರೆ ಹೋಗಿದ್ದಾರೆ. ಆದರೆ, ನ್ಯಾಯಮಂಡಳಿಯು ತಕ್ಷಣಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.