ಅಂಚೆ ಕಚೇರಿಯು ಇಂದು ಬ್ಯಾಂಕ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದು ಇದರಿಂದ ಪಡಿತರ ಹೆಚ್ಚುವರಿ ಅಕ್ಕಿ ಹಣ, ಉದ್ಯೋಗ ಖಾತ್ರಿ, ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ, ಗೃಹಲಕ್ಷ್ಮಿ, ವೃದ್ದಾಪ್ಯ ವೇತನ, ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳು ಹಣ ಜಮಾವಣೆ ಇಲ್ಲವೆ ಪಡೆಯಲು ಬರುವುದು ಸಾಮಾನ್ಯ. ಆದರೆ ಇಕ್ಕಟ್ಟಿನ ಹಾಗೂ ಚಿಕ್ಕದಾದ ಸ್ಥಳದಿಂದಾಗಿ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.