ಹೆಚ್ಚಾಗಿ ನೀಲಗಿರಿ ಮರಗಳು ಇರುವ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸುತ್ತಿರುದರಿಂದ, ಅದರ ನಿಯಂತ್ರಣಕ್ಕೆ ಒಣಗಿರುವ ಎಲೆ, ಕೊಂಬೆ ತೆರವು ಮಾಡಬೇಕು. ಒಂದಕ್ಕೊಂದು ಉಜ್ಜಿಕೊಳ್ಳುವ ಕೊಂಬೆಗಳನ್ನು ತೆಗೆದು ಹಾಕಬೇಕು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ತಂತಿಗಳ ಕೆಳಗೆ ಹಾಗೂ ವಿದ್ಯುತ್ ಪರಿವರ್ತಕ ಬಳಿ ಒಣಗಿದ ಹುಲ್ಲಿನ ಬಣವೆ ಹಾಕುದಂತೆ ರೈತರು ಎಚ್ಚರ ವಹಿಸಬೇಕು ಎಂದು ಅಗ್ನಿ ಶಾಮಕ ಅಧಿಕಾರಿಗಳು ಸಲಹೆ ನೀಡಿದ್ದಾರೆ.