ಹಿರೇಬಾಗೇವಾಡಿಯಿಂದ ಸವದತ್ತಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದೇ ಊರಿನಲ್ಲಿ ಹಾಯ್ದುಹೋಗಿದೆ. ಸದಾ ವಾಹನ ದಟ್ಟಣೆಯಿಂದ ಕೂಡಿದ ಈ ರಸ್ತೆ ಉತ್ತಮವಾಗಿದೆ. ಆದರೆ, ಒಳರಸ್ತೆಗಳ ಇದಕ್ಕೆ ತದ್ವಿರುದ್ಧ. ರಸ್ತೆಬದಿ ಬಿದ್ದಿರುವ ಕಸದ ರಾಶಿ, ನಿರ್ವಹಣೆ ಕಾಣದ ಚರಂಡಿಗಳು, ರಸ್ತೆಮಧ್ಯೆ ಹರಿಯುವ ಕೊಳಚೆ ನೀರು ಹೀಗೆ... ಸಾಲು ಸಾಲು ಸಮಸ್ಯೆಗಳು ಕಣ್ಣಿಗೆ ಬೀಳುತ್ತವೆ.