ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ, ರಸ್ತೆ ಅವ್ಯವಸ್ಥೆ; ಕಿರಿಕಿರಿ

ಉಮ್ಮತ್ತೂರಿನ ಪರಿಶಿಷ್ಟರ ಹೊಸ ಬಡಾವಣೆಯಲ್ಲಿ ಸಮಸ್ಯೆ
Last Updated 6 ಜನವರಿ 2016, 8:45 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಹೋಬಳಿ ವ್ಯಾಪ್ತಿಗೆ ಸೇರಿದ ಉಮ್ಮತ್ತೂರು ಗ್ರಾಮದ ಪರಿಶಿಷ್ಟರ ಹೊಸ ಬಡಾವಣೆಯಲ್ಲಿ ಚರಂಡಿ ಮತ್ತು ರಸ್ತೆ ಅವ್ಯವಸ್ಥೆಯಿಂದ ನಿವಾಸಿಗಳು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಗ್ರಾಮದ ಪರಿಶಿಷ್ಟರ ಹೊಸ ಬಡಾವಣೆ ನಿರ್ಮಾಣಗೊಂಡು 20ಕ್ಕೂ ಹೆಚ್ಚು ವರ್ಷಗಳು ಉರುಳಿವೆ. ಆದರೆ, ಬಡಾವಣೆಯಲ್ಲಿ ಇಲ್ಲಿಯ ವರೆಗೂ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ, ಮನೆಗಳ ಮುಂದೆಯೇ, ರಸ್ತೆ ಯಲ್ಲಿಯೇ ತ್ಯಾಜ್ಯ ನೀರು ಹರಿದು ಹೋಗುತ್ತದೆ. ಇದರಿಂದ ಇಲ್ಲಿನ ನಿವಾಸಿ ಗಳು ನಿತ್ಯ ತೊಂದರೆ ಎದುರಿಸುತ್ತಿದ್ದಾರೆ.

ರಸ್ತೆಯಲ್ಲಿ ಹರಿಯುವ ಕಲ್ಮಷ ನೀರಿನ ಸುತ್ತಲೂ ಕಳೆ ಗಿಡಗಳು ಬೆಳೆದುಕೊಂಡಿವೆ. ಇದರಿಂದ ಬಡಾವಣೆ ಯಲ್ಲಿ ಅನೈರ್ಮಲ್ಯ ಉಂಟಾಗಿದೆ. ಜತೆಗೆ, ಜನಸಂಚಾರ ಮತ್ತು ವಾಹನ ಸಂಚಾರಗಳಿಗೂ ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರಿನಿಂದ ಅಡಚಣೆ ಉಂಟಾಗುತ್ತಿದೆ.

ಕೆಲವು ನಿವಾಸಿಗಳು ರಸ್ತೆಯ ಮಧ್ಯದಲ್ಲಿ ತ್ಯಾಜ್ಯ ನೀರು ಹರಿಸುವ ಪರಿಣಾಮ ಅಕ್ಕಪಕ್ಕದ ನಿವಾಸಿಗಳಿಂದ ಗಲಾಟೆಗಳೂ ನಡೆದಿವೆ. ಆದ್ದರಿಂದ ಮನೆಗಳ ಮುಂಭಾಗವೇ ಗುಂಡಿ ತೆಗೆದು ಕೊಳಚೆ ನೀರು ತುಂಬಿಸುತ್ತಿ ದ್ದೇವೆ ಎಂದು ನಿವಾಸಿ ಗಳು ದೂರುತ್ತಾರೆ.

ಮನೆಗಳ ಮುಂಭಾಗ ಗುಂಡಿ ತೆಗೆದು ತುಂಬಿಸಿದ ನೀರು ಸಾಂಕ್ರಾಮಿಕ ರೋಗಗಳ ಆವಾಸಸ್ಥಾನ ವಾಗಿದೆ. ಈ ನೀರಿನಲ್ಲಿ ಕ್ರಿಮಿಕೀಟಗಳು, ಸೊಳ್ಳೆಗಳು ವಾಸ ಮಾಡುವಂತಾಗಿದೆ. ಜತೆಗೆ, ನಿವಾಸಿಗಳು ಕೆಟ್ಟ ವಾಸನೆ ಸೇವಿಸು ವಂತಾಗಿದೆ. ರೋಗಗಳ ಭೀತಿ ಎದುರಿಸುವಂತಾಗಿದೆ.

ಇಷ್ಟೆ ಅಲ್ಲ, ಬಡಾವಣೆಯಲ್ಲಿರುವ ರಸ್ತೆಗಳೂ ಹದಗೆಟ್ಟಿವೆ. ಮಳೆ ಬಂದರೆ ಕೆಸರುಗದ್ದೆಯಾಗುತ್ತವೆ. ರಸ್ತೆಗೆ ಬಿದ್ದ ಮಳೆ ನೀರು ಹೊರ ಹೋಗುವ ವ್ಯವಸ್ಥೆಯೂ ಇಲ್ಲ. ಪಕ್ಕದ ಬಡಾವಣೆ ಗಳಿಗೆ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ನಮ್ಮ ಬಡಾವಣೆಯ ರಸ್ತೆಗಳಿಗೆ ಕಾಂಕ್ರಿಟ್ ರಸ್ತೆಯಿಂದ ವಂಚಿಸಲಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಬಡಾವಣೆ ರಸ್ತೆಯ ಸನಿಹದಲ್ಲಿಯೇ ತಿಪ್ಪೆಗುಂಡಿಗಳು ನಿರ್ಮಾಣವಾಗಿವೆ. ಸುತ್ತಲೂ ಕಳೆಗಿಡಗಳು ಬೆಳೆದು ಅನೈ ರ್ಮಲ್ಯಕ್ಕೂ ಕಾರಣವಾಗಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ದುರ್ವಾಸನೆ ಸೇವಿಸಬೇಕಾಗಿದೆ. ತಿಪ್ಪೆಗುಂಡಿ ತೆರವು ಗೊಳಿಸಿ ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಇಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡಿ ದ್ದರೂ ಪ್ರಯೋಜನವಾಗಿಲ್ಲ.

‘ಬಡಾವಣೆಯಲ್ಲಿ ಚರಂಡಿ ಸಮಸ್ಯೆ ಮುಖ್ಯವಾಗಿದೆ. ಆದ್ದರಿಂದ ಚರಂಡಿ ನಿರ್ಮಿಸಿ ರಸ್ತೆ ಸರಿಪಡಿಸಿ ಬಡಾವಣೆ ಯಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ನಿವಾಸಿಗಳಾದ ಸಿದ್ದರಾಜು, ಕೆಂಚಯ್ಯ ಆಗ್ರಹಿಸಿದ್ದಾರೆ ಒತ್ತಾಯಿಸಿದ್ದಾರೆ.

‘ಗ್ರಾಮದ ಹೊಸ ಬಡಾವಣೆಗೆ ಚರಂಡಿ ನಿರ್ಮಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹಾಗೂ 14ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾ ಯೋಜನೆಗೆ ಸೇರಿಸಲಾಗಿದೆ. ಮುಂದಿನ ದಿನಗಳಿಂದ ಕಾಮಗಾರಿ ಆರಂಭಿಸಲಾಗುವುದು’ ಎಂದು ಉಮ್ಮತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT