ಕಳೆದ ವರ್ಷ ಹಿಂಗಾರು ಹಂಗಾಮಿ ನಲ್ಲಿ ತಾಲ್ಲೂಕಿನ ಶಾನುಭೋಗನಹಳ್ಳಿ, ನರಸಿನ ಕುಪ್ಪೆ, ಹೆತ್ತಗೌಡನಹಳ್ಳಿ, ಭೈಚನಹಳ್ಳಿ ಗ್ರಾಮಗಳ ಆಸಕ್ತ ರೈತರಿಗೆ ಸಸಿಗಳನ್ನು ನೀಡಿ ಪ್ರಾಯೋಗಿಕವಾಗಿ ಕೃಷಿ ನಡೆಸಲಾಗಿತ್ತು. ಇದು ತೃಪ್ತಿದಾಯಕ ಫಲಿತಾಂಶ ನೀಡಿದ್ದು ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಇದನ್ನು ಕೃಷಿ ಮಾಡಿ ರೈತರಿಗೆ ಪರಿಚಯಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ತಾಲ್ಲೂಕಿನ ಮೂರು ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸುವ ಸಿದ್ಧತೆ ನಡೆದಿದೆ ಎಂದರು.