ಕಸ ಸಂಗ್ರಹಿಸುವ ವಾಹನ ಮನೆಮನೆಗೆ ಬರುತ್ತಿದ್ದರೂ, ನಿವಾಸಿಗಳು ಕಸ ವಿಂಗಡಿಸಿ ಕೊಡುತ್ತಿಲ್ಲ. ಮೂಲದಲ್ಲೇ ಕಸ ವಿಂಗಡಿಸಿ (ಒಣ ಕಸ, ಹಸಿ ಕಸ) ಕೊಡುವ ಜವಾಬ್ದಾರಿ ನಾಗರಿಕರಾದ ನಮ್ಮ ಮೇಲಿಲ್ಲವೇ? ಪೌರ ಕಾರ್ಮಿಕರಿಗೆ ಸಹಕಾರ ನೀಡುವ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಇನ್ನಾದರೂ ಮನಸ್ಥಿತಿಯನ್ನು ಬದಲಿಸಿಕೊಂಡು ಬೆಂಗಳೂರನ್ನು ಸುಂದರವಾಗಿಸುವತ್ತ ಹೆಜ್ಜೆ ಇಡೋಣ.