‘ಶಾಖವಾದಿ ಗ್ರಾಮ ಪಂಚಾಯಿತಿಯ ಶಾಖವಾದಿ ಹಾಗೂ ಕೂಡ್ಲೂರು ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಯ ಎರಡು ಕಾಮಗಾರಿಗಳನ್ನು ನರೇಗಾದಡಿ ಮಾಡಲಾಗಿದೆ. ಮುಕ್ತಿಧಾಮದಲ್ಲಿ ಶವಸಂಸ್ಕಾರಕ್ಕೆ ತೊಂದರೆ ಪಡುತ್ತಿದ್ದ ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಿದೆ. ಇನ್ನುಳಿದಂತೆ ಪ್ರಸಕ್ತ ವರ್ಷದಲ್ಲಿ ಚಂದ್ರಬಂಡ, ಚಿಕ್ಕಸೂಗುರು, ಹಿರಾಪೂರ, ಜಂಬಲದಿನ್ನಿ, ಕಾಡ್ಲೂರು, ಕಲ್ಮಲಾ, ಕಮಲಾಪೂರ, ಎಲ್.ಕೆ.ದೊಡ್ಡಿ, ಉಡಮಗಲ್, ಯದ್ಲಾಪೂರ ಮತ್ತು ಯಾಪಲದಿನ್ನಿ ಗ್ರಾಮ ಪಂಚಾಯಿತಿಗಳಲ್ಲೂ ನರೇಗಾ ಯೋಜನೆಯಡಿ ಸ್ಮಶಾನ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ’ ಎಂದು ರಾಯಚೂರು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಪವಾರ ತಿಳಿಸಿದ್ದಾರೆ.