‘ಪ್ರಜಾತಂತ್ರದ ಉಳಿವು, ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಸ್ವಚ್ಛ ರಾಜಕಾರಣಕ್ಕೆ ಮತದಾನವು ಭದ್ರ ಬುನಾದಿ. ಜನಾನುರಾಗಿ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಆಯ್ಕೆಗೆ ಮತದಾನ ಒಳ್ಳೆಯ ಅಸ್ತ್ರ. ಈ ಅಸ್ತ್ರವನ್ನು ವಿವೇಚನೆಯಿಂದ ಬಳಸಬೇಕು. ಮತದಾನದ ದಿನ ರಜೆ ಸಿಕ್ಕಿದೆ ಎಂದು ಸುತ್ತಾಡಲು ಪ್ರವಾಸ ಹೋಗುವುದು ಅಥವಾ ಕುಟುಂಬ ಸದಸ್ಯರ ಜತೆ ಮನೆಯಲ್ಲೇ ಕಾಲಹರಣ ಮಾಡುವುದನ್ನು ಬಿಟ್ಟು ಮತಗಟ್ಟೆಗೆ ಬಂದು ಮತ ಹಾಕಬೇಕು’ ಎಂದು ಮನವಿ ಮಾಡಿದರು,