ಒರಟು ಸ್ವಭಾವದ ಹಳ್ಳಿ ಹುಡುಗನಾಗಿ ಧರ್ಮ ಕೀರ್ತಿರಾಜ್ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ಬಲ ರಾಜವಾಡಿ, ಜಿ.ಜಿ.ಗೋವಿಂದೆಗೌಡ, ರವಿರೆಡ್ಡಿ, ಮಂಡ್ಯ ಸಿದ್ದು ಮುಂತಾದವರ ತಾರಾಬಳಗವಿದೆ. ಡಾ.ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿ.ಪಳನಿವೇಲು ಛಾಯಾಚಿತ್ರಗ್ರಹಣ, ಸಿ.ಕೆ.ಕುಮಾರ್ ಸಂಕಲನ ಚಿತ್ರಕ್ಕಿದೆ. ಕಲಬುರಗಿ, ಕೊಳ್ಳೇಗಾಲ, ಯಾದಗಿರಿ, ಹುಬ್ಬಳ್ಳಿ, ಬೆಳಗಾವಿ ಮೊದಲಾದೆಡೆ ಚಿತ್ರೀಕರಣ ನಡೆಸಲು ತಂಡ ಆಲೋಚಿಸಿದೆ.