‘‘ಬಿ.ಸಿ.ಪಾಟೀಲ್ ಅಭಿನಯದ ‘ಕೌರವ’ ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದೆ. ಇಲ್ಲಿಯವರೆಗೂ 1600ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದೇನೆ. ಈಗ ನನ್ನದೇ ಕಥೆಯೊಂದನ್ನು ನಿರ್ದೇಶನ ಮಾಡಲು ಹೊರಟಿರುವೆ. ಚಿತ್ರವು ದೇಶಪ್ರೇಮ ಸಾರುವ ಅಂಶಗಳನ್ನು ಒಳಗೊಂಡಿದೆ. ಮುಖ್ಯಂತ್ರಿ ಸಿದ್ದರಾಮಯ್ಯ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ’’ ಎನ್ನುತ್ತಾರೆ ವೆಂಕಟೇಶ್.