ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್ಮ್ಯಾನ್’ ಸಿನಿಮಾದಿಂದ ಚಂದನವನದಲ್ಲಿ ಜಡೇಶ್ ಖ್ಯಾತಿ ಪಡೆದಿದ್ದರು. ಇದಾದ ಬಳಿಕ ಶರಣ್ ನಟನೆಯ ‘ಗುರು ಶಿಷ್ಯರು’ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದರು. ಇತ್ತೀಚೆಗೆ ತೆರೆಕಂಡ ‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ್, ನೈಜ ಘಟನೆಗಳನ್ನು ಆಧರಿಸಿದ ಮತ್ತೊಂದು ಕಥೆ ಹೆಣೆದಿದ್ದಾರೆ. ವಿಜಯ್ ಅವರ 29ನೇ ಸಿನಿಮಾ ಇದಾಗಿರುವ ಕಾರಣ, ಸದ್ಯಕ್ಕೆ ಚಿತ್ರಕ್ಕೆ ‘VK29’ ಎಂಬ ಶೀರ್ಷಿಕೆ ಇಡಾಗಿದ್ದು, ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ..!’ ಎನ್ನುವ ಅಡಿಬರಹ ನೀಡಲಾಗಿದೆ. ‘ಕಾಟೇರ’ ಸಿನಿಮಾಗೂ ಇದೇ ರೀತಿ ‘ಹಿಂದಿರೋವ್ರಿಗೆ ದಾರಿ, ಮುಂದಿರೋವ್ನದ್ದು ಜವಾಬ್ದಾರಿ’ ಎಂಬ ಪಂಚಿಂಗ್ ಅಡಿಬರಹವನ್ನು ನೀಡಲಾಗಿತ್ತು.