ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಹಚ್ಚಿದ ಒಲೆಗೂ ವಾಸ್ತು ಬೇಕೇ...

ಇದೇ ಹೊಸ ಹಾಡು
Last Updated 2 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬಿದ್ದಲ್ಲೆ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂ ಬಿಡುವ ಗಿಡ ಮರಕೆ ವಾಸ್ತುವೆಲ್ಲಿ?

ಗುಡಿಸಲಿನ ಹೊಸಿಲಲ್ಲಿ ಬಡ ತಾಯ ಮಡಿಲಲ್ಲಿ
ನಸುನಗುವ ಮಗು ಮನಕೆ ವಾಸ್ತುವೆಲ್ಲಿ?

ಮನಸೆಂಬ ಭೂಪಟದಿ ಗಡಿ ರೇಖೆ ಇಲ್ಲ...
ಮನಸೆಂಬ ಮನೆಯಲ್ಲಿ ಗೋಡೆ ಇಲ್ಲ.
ಹರಿವ ನೀರಿನ ಹಾಗೆ ಬದುಕು ಚಲಿಸಿರುವಾಗ
ಆಣೆಕಟ್ಟೆಯ ಮಾತು ಆಡಬೇಕೆ ?

ಬೀಸೋ ಗಾಳಿಯ ಅಲೆಗೆ ವಾಸ್ತು ಏಕೆ ?
ಗಾಯ ಮಾಯಿಸುವಂತ ಬಿಸಿಲು ಬಂದಿರುವಾಗ
ಕಿಟಕಿ ಬಾಗಿಲುಗಳನು ಮುಚ್ಚಬೇಕೆ ?
ಹಕ್ಕಿ ಗೂಡಿನ ಉಲಿಗು ವಾಸ್ತು ಬೇಕೇ ?

ತುತ್ತು ಕಾಣದ ಬಳಗ ಸುತ್ತ ನಿಂತಿರುವಾಗ
ಗತ್ತು ಶ್ರೀಮಂತಿಕೆಯ ಲೋಹವೇಕೆ?
ಅಮ್ಮ ಹಚ್ಚಿದ ಒಲೆಗೂ ವಾಸ್ತು ಬೇಕೇ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT