ಶನಿವಾರ, 21 ಫೆಬ್ರುವರಿ 2026
×
ADVERTISEMENT
ADVERTISEMENT

ಒಳನೋಟ | ಕಾಣದ ಕೈ: ಕಾಡುವ ಡ್ರಗ್ಸ್‌

ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್‌ ಫ್ಯಾಕ್ಟರಿ: ಹಲವು ಜಿಲ್ಲೆಗಳಲ್ಲೂ ಜಾಲ
Published : 21 ಫೆಬ್ರುವರಿ 2026, 22:30 IST
Last Updated : 21 ಫೆಬ್ರುವರಿ 2026, 22:30 IST
ಫಾಲೋ ಮಾಡಿ
Comments
 ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಮಾದಕ ವಸ್ತುವಿಗಾಗಿ ನಗರ ಪೊಲೀಸರ ಕಾರ್ಯಾಚರಣೆ 
 ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಮಾದಕ ವಸ್ತುವಿಗಾಗಿ ನಗರ ಪೊಲೀಸರ ಕಾರ್ಯಾಚರಣೆ 
 ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಮಾದಕ ವಸ್ತುವಿಗಾಗಿ ನಗರ ಪೊಲೀಸರ ಕಾರ್ಯಾಚರಣೆ 
 ಮೈಸೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಮಾದಕ ವಸ್ತುವಿಗಾಗಿ ನಗರ ಪೊಲೀಸರ ಕಾರ್ಯಾಚರಣೆ 
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಾಣಶಿವಣಗಿ ಗ್ರಾಮದಲ್ಲಿ ಬೆಳೆದಿದ್ದ ಗಾಂಜಾವನ್ನು ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡಿದ್ದರು
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಾಣಶಿವಣಗಿ ಗ್ರಾಮದಲ್ಲಿ ಬೆಳೆದಿದ್ದ ಗಾಂಜಾವನ್ನು ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡಿದ್ದರು
ಡಾ.ಬಿ.ಎನ್‌.ರವೀಶ್‌
ಡಾ.ಬಿ.ಎನ್‌.ರವೀಶ್‌
ಜೆ.ಬಿ.ರಂಗಸ್ವಾಮಿ
ಜೆ.ಬಿ.ರಂಗಸ್ವಾಮಿ
ಪರಶು
ಪರಶು
ಎಸ್.ಬಸವರಾಜು
ಎಸ್.ಬಸವರಾಜು
ಸೀಮಾ ಲಾಟ್ಕರ್
ಸೀಮಾ ಲಾಟ್ಕರ್
ರಾಜ್ಯದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡಲು ಸರ್ಕಾರ ಪಣ ತೊಟ್ಟಿದೆ. ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಹಾನಿ ಕುರಿತೂ ವಿದ್ಯಾರ್ಥಿಗಳಿಗೆ ಶಾಲಾ–ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಇನ್ನೂ ಹೆಚ್ಚು ನಡೆಯಬೇಕು
ಜಿ.ಪರಮೇಶ್ವರ ಗೃಹ ಸಚಿವ
ರಾಜ್ಯದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ಎಎನ್‌ಟಿಎಫ್‌) ರಚಿಸಲಾಗಿದೆ. ಮಾದಕ ವಸ್ತುಗಳ ಮಾರಾಟಗಾರರು ಪೂರೈಕೆದಾರರ ಸಿಂಥೆಟಿಕ್ ಡ್ರಗ್ಸ್ ಉತ್ಪಾದಕರ ವಿರುದ್ಧ ಕಾರ್ಯಾಚರಣೆ ಚುರುಕು ಮಾಡಲಾಗಿದೆ
ಎಂ.ಎ.ಸಲೀಂ ರಾಜ್ಯ ಪೊಲೀಸ್ ಮಹಾನಿರ್ದೇಶಕ
ಬೇಗ ಕಿಕ್‌ ಸಿಗಬೇಕು ಎನ್ನುವ ಕಾರಣಕ್ಕೆ ಮಾದಕ ವ್ಯಸನಕ್ಕೆ ತುತ್ತಾಗಿರುವ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. 13– 19 ವರ್ಷದೊಳಗಿನವರು ಇದಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ. ಸಮಾಜದಲ್ಲಿ ಕೆಲವು ಘಾತಕ ಶಕ್ತಿಗಳು ಯುವಜನರನ್ನು ಗುರಿಯಾಗಿಸಿ ಲಾಭ ಪಡೆಯುವ ದುಷ್ಕೃತ್ಯ ನಡೆಸುತ್ತಿವೆ. ಡ್ರಗ್ಸ್‌ ಸೇವನೆಯಿಂದ ಮಕ್ಕಳ ಒಟ್ಟಾರೆ ಬೆಳವಣಿಗೆ ಮೇಲೆ ಮಾರಕ ಪರಿಣಾಮಗಳಾಗುತ್ತಿವೆ. ಕುಟುಂಬಗಳೂ ಸಂಕಟದಲ್ಲಿವೆ.
ಡಾ.ಬಿ.ಎನ್‌.ರವೀಶ್‌ ಮೈಸೂರು ವೈದ್ಯಕೀಯ ವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ
ಡ್ರಗ್‌ ಪೆಡ್ಲಿಂಗ್‌ ಹಿಂದಿನಿಂದಲೇ ಇತ್ತು. ಶ್ರೀಮಂತ ಮಕ್ಕಳು ಸಣ್ಣ ಪ್ರಮಾಣದಲ್ಲಿ ಬಳಸುತ್ತಿದ್ದರು. ಗಾಂಜಾ ಬಳಕೆ ಹೆಚ್ಚಿತ್ತು. ನಾರ್ಕೊಟಿಕ್‌ ಡ್ರಗ್ಸ್‌ ಉತ್ಪಾದನೆ ಮಾಡುವವರು ಪೊಲೀಸರಿಗೆ ಯಾವುದೇ ಲಿಂಕ್‌ ಸಿಗದಂತೆ ಗೌಪ್ಯವಾಗಿ ಕೆಲಸ ಮಾಡುವುದರಿಂದ ಪತ್ತೆ ಕಾರ್ಯ ಕಷ್ಟವಾಗುತ್ತಿರಬಹುದು. ಕಾರ್ಖಾನೆಗಳಿಗೆ ಅನುಮತಿ ನೀಡುವಾಗಲೇ ಎಚ್ಚರಿಕೆ ವಹಿಸುವುದು ಸೂಕ್ತ.
ಜೆ.ಬಿ.ರಂಗಸ್ವಾಮಿ ನಿವೃತ್ತ ಡಿವೈಎಸ್‌ಪಿ
ಎಲ್ಲಾ ಜಿಲ್ಲೆಗಳಲ್ಲಿ ಡ್ರಗ್ಸ್ ವ್ಯಸನಿಗಳ ಸುಸಜ್ಜಿತ ಪುನರ್ವಸತಿ ಕೇಂದ್ರ ತೆರೆಯಬೇಕು. ಕೆಲವೆಡೆ ವ್ಯಸನ ತಗ್ಗಿಸುವ ಪ್ರಯತ್ನವಷ್ಟೇ ಆಗುತ್ತಿದೆ. ಆದರೆ ಅದರಿಂದ ಬೇರ್ಪಡಿಸುವ ಕೆಲಸವಾಗಬೇಕಿದೆ. ಅದಕ್ಕಾಗಿ ತಜ್ಞ ಆಪ್ತಸಮಾಲೋಚಕರು ವಿಶಾಲವಾದ ಸ್ಥಳದ ಅವಶ್ಯಕತೆಯಿದೆ. ಹೀಗಾಗಿ ಟ್ರಸ್ಟ್‌ ಮೂಲಕ ನಡೆಸುವುದು ಕಷ್ಟಸಾಧ್ಯ. ಸರ್ಕಾರವೇ ಪ್ರಯತ್ನಿಸಬೇಕು
ಎಂ.ಎಲ್.ಪರಶುರಾಮ್ ಒಡನಾಡಿ ಸಂಸ್ಥೆಯ ನಿರ್ದೇಶಕ
ನಮ್ಮ ಪುನರ್ವಸತಿ ಕೇಂದ್ರಗಳಲ್ಲಿ 20 ಜನ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. 56 ಕಡೆ ಡ್ರಗ್ಸ್‌ ವ್ಯಸನಿಗಳ ಶಿಬಿರ ನಡೆಸಿ ಪ್ರಾರಂಭಿಕ ಹಂತದ ಚಿಕಿತ್ಸೆ ನೀಡಿದ್ದೇವೆ. ಸರ್ಕಾರವೂ ಈ ನಿಟ್ಟಿನಲ್ಲಿ ಯೋಚಿಸಬೇಕು. ಜಾಗೃತಿ ಮೂಡಿಸುವುದರಿಂದ ಪರಿಣಾಮ ಬೀರುವುದಿಲ್ಲ. ಪರ್ಯಾಯ ಕ್ರಮಗಳ ಬಗ್ಗೆ ಚಿಂತಿಸಬೇಕು.
ಎಸ್.ಬಸವರಾಜು ಸಂಸ್ಥಾಪಕರು ಬಸವಮಾರ್ಗ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ ಹೆಬ್ಬಾಳ ಮೈಸೂರು.
ನಗರದೊಳಗೆ ಮಾದಕ ವಸ್ತು ಬಾರದಂತೆ ತಡೆಯುವುದೇ ನಮ್ಮ ಗುರಿ. ಎರಡು ವಾರದಲ್ಲಿ 16 ಪೆಡ್ಲರ್‌ಗಳನ್ನು ಬಂಧಿಸಿದ್ದೇವೆ. ಡ್ರೋಣ್‌ ಕ್ಯಾಮೆರಾ ಮೂಲಕ ಸೂಕ್ಷ್ಮ ಪ್ರದೇಶಗಳ ಚಟುವಟಿಕೆಗಳನ್ನೂ ಗಮನಿಸಲಾಗುತ್ತಿದೆ.
ಸೀಮಾ ಲಾಟ್ಕರ್‌ ಮೈಸೂರು ನಗರ ಪೊಲೀಸ್‌ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT