ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಯೋಚಿಸಿದ ಶುಭ ಕಾರ್ಯಗಳಿಗೆ ವಿಘ್ನಗಳು ಎದುರಾಗಬಹುದು
Published 6 ಮಾರ್ಚ್ 2024, 21:22 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಳೆದು ಹೋಗಿರಬಹುದೆಂದು ತಿಳಿದಿದ್ದ ದಾಖಲೆ ಪತ್ರಗಳು ಸಿಕ್ಕು ಮನಸ್ಸಿಗೆ ನೆಮ್ಮದಿ. ಇತರರಿಗೆ ನೀವೇನೆಂದು ತೋರಿಸಲು ಇಂದು ಸೂಕ್ತ ದಿನ. ಹೊಸ ವಾತಾವರಣಕ್ಕೆ ಮನೆಯವರೆಲ್ಲರೂ ಹೊಂದಿಕೊಳ್ಳಲು ಯತ್ನಿಸುವರು.
ವೃಷಭ
ಔಷಧಿ ಹಾಗೂ ರಾಸಾಯನಿಕ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಈ ದಿನ ಹರ್ಷದಾಯಕವಾಗಿರುತ್ತದೆ. ಕೆಲವು ಸೂಕ್ಷ್ಮ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಂಡು ಎಚ್ಚರಿಕೆಯಿಂದ ವರ್ತಿಸಿ.
ಮಿಥುನ
ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆ ಚೇತರಿಕೆಯ ಮೆಟ್ಟಿಲನ್ನು ನೋಡಲಿದೆ. ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿರಿ. ದೀರ್ಘಕಾಲೀನ ಯೋಜನೆಗಳು ಫಲದಾಯಕವೆನಿಸಲಿದೆ.
ಕರ್ಕಾಟಕ
ರಸ್ತೆ ಗುತ್ತಿಗೆದಾರರಿಗೆ, ಮರ-ಮುಟ್ಟುಗಳ ಮತ್ತು ಕಲ್ಲಿನ ವ್ಯಾಪಾರ ಮಾಡುವವರು ತಮ್ಮ ಶ್ರಮದ ದುಪ್ಪಟ್ಟು ಸಂಪಾದನೆಯನ್ನು ಅಪೇಕ್ಷಿಸಬಹುದು. ನ್ಯಾಯಾಲಯದ ಮೊರೆ ಹೋಗುವಂಥ ಕೃತ್ಯಗಳು ನಡೆಯಲಿದೆ.
ಸಿಂಹ
ಸಿವಿಲ್ ಎಂಜಿನಿಯರ್‌ಗಳು ಯಾವುದೇ ಕೆಲಸ ಮಾಡಿದರೂ ಅದನ್ನು ವೈವಿಧ್ಯಮಯವಾಗಿ ಯೋಚಿಸಿ ಮಾಡುವುದು ಉತ್ತಮ. ಉದ್ಯೋಗದಲ್ಲಿ ಸಮಸ್ಯೆ ಕಂಡು ಬಂದರೂ ನಿವಾರಣೆಯಾಗುವುದು.
ಕನ್ಯಾ
ಕೃಷಿ ಉತ್ಪನ್ನಗಳ ಬೆಲೆ ಏರುವುದರಿಂದ ಸಾಲವನ್ನು ತೀರಿಸಿಕೊಳ್ಳುವ ಅವಕಾಶ ಒದಗುವುದು. ಸ್ನೇಹಿತರು ಆಲೋಚನೆಗಳನ್ನು ಗೌರವಿಸುವುದಲ್ಲದೆ ಸಲಹೆಗಳನ್ನು ಕೇಳಲಿದ್ದಾರೆ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ.
ತುಲಾ
ಕಚೇರಿಯಲ್ಲಿ ಬೇಸರ ತರುವಂಥ ಘಟನೆಗಳು ನಡೆದರೂ ಧೃತಿಗೆಡದೆ, ನಾಳೆ ಎಂಬುದೊಂದಿದೆ ಎಂಬ ಆಶಾಭಾವನೆ ಇರಲಿ. ಸಕ್ರಿಯ ಹಾಗೂ ಕಾರ್ಯ ಮಗ್ನತೆಯ ದಿನವು ಇದಾಗಿದೆ. ವಾಹನ ಚಾಲನೆ ಮಾಡುವಾಗ ಜಾಗೃತರಾಗಿರಿ.
ವೃಶ್ಚಿಕ
ಮೇಲಧಿಕಾರಿಗಳ ವಿರುದ್ಧ ವಾದವನ್ನು ಮಾಡಿ ಸಮಯ ಹಾಳು ಮಾಡುವ ಬದಲು ಸಮಾಧಾನದಿಂದ ಕೆಲಸ ಮಾಡಿ ಹಾಗೆ ಮಾಡಿದಲ್ಲಿ ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರುವುದು. ಆಶಾವಾದಿಗಳಾಗಿರುವಿರಿ.
ಧನು
ಹೆಚ್ಚಿನ ಕೆಲಸದ ಬಗ್ಗೆ ಪ್ರೀತಿ ಪಾತ್ರರೊಡನೆ ಸಮಾಲೋಚನೆಯನ್ನು ನಡೆಸುವಿರಿ. ಮದುವೆಯ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ಓಡಾಟ ಹೆಚ್ಚುವುದು. ಧನಾಗಮನ ಹೆಚ್ಚಿದ್ದರೂ ಖರ್ಚಿನ ಪಟ್ಟಿ ದೊಡ್ಡದಿದೆ.
ಮಕರ
ಯೋಚಿಸಿದ ಶುಭ ಕಾರ್ಯಗಳಿಗೆ ಸಣ್ಣ-ಪುಟ್ಟ ವಿಘ್ನಗಳು ಎದುರಾಗ ಬಹುದು. ಆದರೆ, ಹೆದರುವ ಅವಶ್ಯಕತೆ ಇರುವುದಿಲ್ಲ. ಜೀವನದಲ್ಲಿ ಭಾರಿ ಬದಲಾವಣೆಯನ್ನು ಕಾಣಲಿದ್ದೀರಿ. ಉದರ ವ್ಯಾಧಿಗಳು ದೂರವಾಗುತ್ತದೆ.
ಕುಂಭ
ಸೃಜನಶೀಲತೆಗೆ ಉತ್ತಮ ವೇದಿಕೆ ಲಭಿಸಲಿದೆ. ಸಂಶೋಧನಾಕಾರರಿಗೆ, ನ್ಯಾಯಾಂಗ ಇಲಾಖೆಯವರಿಗೆ ಒಳ್ಳೆಯ ದಿನ. ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುವುದು. ಮಕ್ಕಳ ಆರೋಗ್ಯವು ಸುಖಕರವಾಗಿರುತ್ತದೆ.
ಮೀನ
ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಈಶ್ವರನ ಕೃಪೆಯಿಂದ ಆರ್ಥಿಕ ಸ್ಥಿತಿಗತಿ ಇನ್ನಷ್ಟು ಉತ್ತಮಗೊಳ್ಳಲಿದೆ. ಯೋಗಾಭ್ಯಾಸದಿಂದ ಮನಸ್ಸಿಗೆ ಹಿತವೆನಿಸಲಿದೆ.