‘ನನ್ನ ಸಿನಿಮಾ ಆ ಎಲ್ಲ ತೊಂದರೆಗಳ ಮಧ್ಯವೂ ಚೆನ್ನಾಗಿ ಓಡುತ್ತಿದೆ. ಜನರು ಇಷ್ಟಪಟ್ಟು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಆದರೆ ನನಗೆ ಆದ ತೊಂದರೆ ಇನ್ಯಾವುದೇ ಕನ್ನಡ ಸಿನಿಮಾಗಳಿಗೆ ಆಗಬಾರದು. ಆ ಕಾರಣಕ್ಕೆ ಈಗಾಗಲೇ ವಾಣಿಜ್ಯ ಮಂಡಳಿಯೊಂದಿಗೆ ಮಾತನಾಡಿದ್ದೇನೆ. ಹಾಗೆಯೇ ಮುಂಬೈನಲ್ಲಿರುವ ಬುಕ್ ಮೈ ಷೋ ಕಂಪೆನಿಯನ್ನು ಸಂಪರ್ಕಿಸಿದ್ದೇನೆ. ಕೆಲವು ಕಿಡಿಗೇಡಿ ಹ್ಯಾಕರ್ಸ್ಗಳಿಂದ ಹೀಗೆ ರೇಟಿಂಗ್ನಲ್ಲಿ ವಂಚನೆ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಏನು ಬೇಕೊ ಅದನ್ನು ಮಾಡುತ್ತೇನೆ. ವಾಣಿಜ್ಯ ಮಂಡಳಿ ಹೊಸ ಆ್ಯಪ್ ಒಂದನ್ನು ತರುವ ಆಲೋಚನೆ ಮಾಡುತ್ತಿದೆ. ಅದು ಸಾಧ್ಯವಾಗಿಲ್ಲ ಎಂದರೆ ನಾನೇ ಒಂದು ಸ್ವಂತ ಆ್ಯಪ್ ರೂಪಿಸುತ್ತೇನೆ’ ಎಂದೂ ನವರಸನ್ ಹೇಳಿದರು. ಜತೆಗೆ ವೈರ ಸಿನಿಮಾವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವ ಜನರಿಗೆ ಕೃತಜ್ಞತೆ ಹೇಳಲು ಅವರು ಮರೆಯಲಿಲ್ಲ.